ಹೊಸದಿಗಂತ ವರದಿ, ಕಲಬುರಗಿ
ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲಬುರಗಿ ನಗರದ ವತಿಯಿಂದ ವಿಜಯ ದಶಮಿ ಪಥ ಸಂಚಲನದ ಅಂಗವಾಗಿ ಶನಿವಾರ ನಗರದ ಪ್ರಮುಖ ರಸ್ತೆಗಳಲ್ಲಿ ಗಣವೇಷಧಾರಿ ಸ್ವಯಂಸೇಕರಿಂದ ಗುಣಾತ್ಮಕ ಪಥಸಂಚಲನ ಜರುಗಿತು.
ನಗರದ ಸದಾ೯ರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಆರಂಭವಾದ ಗುಣಾತ್ಮಕ ಸಂಚಲನವು ಲಾಹೋಟಿ ಪೆಟ್ರೋಲ್ ಬಂಕ್, ಗೋಲ್ಡ್ ಹಬ್,ಎಸ್.ಎಂ.ಪಂಡಿತ್ ರಂಗಮಂದಿರ, ಜಗತ್ ವೃತ್ತದಿಂದ ಸಾಗಿ, ಜವಳಿ ಕಾಂಪ್ಲೆಕ್ಸ್, ನಲ್ಲಿ ಸಂಪನ್ನಗೊಂಡಿತು.
ಶನಿವಾರ ಬೆಳಿಗ್ಗೆ ನಡೆದ ಗುಣಾತ್ಮಕ ಸಂಚಲನದಲ್ಲಿ ಸರಿಸುಮಾರು 77 ಸ್ವಯಂಸೇವಕರು ಪೂಣ೯ ಗಣವೇಷದೊಂದಿಗೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದಯಾನಂದ ಜೀ, ಸತೀಶ್ ಕುಮಾರ್, ಸೇರಿದಂತೆ ಇತರೆ ಸಂಘದ ಪ್ರಮುಖರು ಉಪಸ್ಥಿತರಿದ್ದರು.