ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿಲ್ಲಿಯಲ್ಲಿ ಹೇಗೆ ಕಾಂಗ್ರೆಸ್ ಹಿರಿಯ ಮುಖಂಡರ ಜಿ-23 ಬಣ ಇದೆಯೋ ಹಾಗೆಯೇ ಕರ್ನಾಟಕದಲ್ಲಿ ಕೆ-23 ಬಣಕ್ಕೆ ನಟಿ ರಮ್ಯಾ ಮುಹೂರ್ತ ಫಿಕ್ಸ್ ಮಾಡುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಗೊಂದಲದ ಗೂಡಾಗಿದೆ. ಹೊಂದಾಣಿಕೆ ಇಲ್ಲ. 224 ಕ್ಷೇತ್ರಗಳಿಗೆ ಅಭ್ಯರ್ಥಿಗಳೇ ಇಲ್ಲ. ಆದರೂ ಟವೆಲ್ ಹಾಕಲು ಶುರು ಮಾಡಿದ್ದಾರೆ. ಆ ಟವೆಲ್ ಹಾಕಲು ಹೊರಟಿರುವುದರಿಂದಲೇ ಜಗಳ ಶುರುವಾಗಿದೆ. ಒಂದು ಕಡೆ ಜಮೀರ್ ಬಣ, ಇನ್ನೊಂದು ಕಡೆ ರಮ್ಯಾ ಎಂದರು.
ರಮ್ಯಾ, ಎಂ.ಬಿ.ಪಾಟೀಲ್ ಪರ ಒಂದು ಟೀಂ, ಡಿಕೆಶಿ ನಲಪಾಡ್ ಪರ ಮತ್ತೊಂದು ಟೀಂ ಆಗಿದೆ. ಕಾಂಗ್ರೆಸ್ನ ಗುಂಪುಗಳ ಬಯಲಾಟ ಇದು. ಆ ಗುಂಪುಗಳ ಬಯಲಾಟ ಈಗ ಬೀದಿಗೆ ಬಂದಿದೆ ಎಂದರು.
ಕಾಂಗ್ರೆಸ್ನ ಬೇಗುದಿ ಹೊಗೆ ಆಡ್ತಿತ್ತು ಇಷ್ಟು ದಿನ. ಈಗ ಆ ಬೇಗುದಿ ಬೆಂಕಿ ಉಗುಳ್ತಿದೆ. ನೀನೇ ಸಾಕಿದಾ ಗಿಳಿ ಎಂಬಂತೆ ಅವರ ಅಧ್ಯಕ್ಷ ವಿರುದ್ಧವೇ ಬಂಡಾಯ ಸಾರಿದೆ. ರಮ್ಯಾಜಿ ಅವರು ಈಗ ಫೀಲ್ಡ್ಗೆ ಇಳಿದಿದ್ದಾರೆ. ಡಿಕೆಶಿ- ಸಿದ್ದರಾಮಯ್ಯ ಸಂಘರ್ಷದಿಂದ ಈಗಾಗಲೇ ಮನೆಯೊಂದು ಎರಡು ಬಾಗಿಲು ಅಂತಾ ಇತ್ತು. ರಮ್ಯಾ ಬಂದು ಮೂರನೇ ಬಾಗಿಲು ತೆರೆದಿದ್ದಾರೆ ಎಂದರು.