ಕಾಂಗ್ರೆಸ್‌ ಯಶಸ್ಸು: ಕರ್ನಾಟಕದಲ್ಲಿ ದ್ವೇಷದ ವಿರುದ್ಧ ಪ್ರೀತಿಗೆ ಜಯ ಸಿಕ್ಕಿದೆ-ರಾಹುಲ್‌ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಹುಮತದಿಂದ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, ಈ ಯಶಸ್ಸಿಗೆ ದೆಹಲಿಯಲ್ಲಿ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ಜನತೆ, ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ ಧನ್ಯವಾದ ತಿಳಿಸಿದರು. ದ್ವೇಷದ ವಿರುದ್ಧ ಪ್ರೀತಿಗೆ ಜಯ ಸಿಕ್ಕಿದೆ ಎಂದರು.

ಚುನಾವಣೆಯಲ್ಲಿ ಜನರ ಶಕ್ತಿ ಏನೆಂಬುದನ್ನು ತೋರಿಸಿದ್ದಾರೆ. ಕರ್ನಾಟಕದಲ್ಲಿ ದ್ವೇಷದ ಬಜಾರ್ ಬಂದ್ ಆಗಿದೆ. ನಾವು ಪ್ರೀತಿ, ಪ್ರೇಮದಿಂದ ಕರ್ನಾಟಕ ಚುನಾವಣೆ ಗೆದ್ದಿದ್ದೇವೆ. ನಾವು ನೀಡಿದ ಐದು ಘೋಷಣೆಗಳನ್ನು ಜಾರಿಗೆ ತರಲು ಮುಂದಾಗುತ್ತೇವೆ. ಕಾಂಗ್ರೆಸ್ ಅನ್ನು ಬೆಂಬಲಿಸಿದ ಕರ್ನಾಟಕದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಕಾಂಗ್ರೆಸ್‌ ಗೆಲುವಿನ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಗೆಲುವಿನ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!