ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿದರು. ಈ ಸಂದರ್ಭದಲ್ಲಿ ಸಚಿವರು ಪೊರಕೆ ಹಿಡಿದು ದೆಹಲಿಯ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣವನ್ನು ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, ಭಾರತೀಯ ರೈಲ್ವೆ, ಅಂಚೆ ಕಚೇರಿ, ಟೆಲಿಕಾಂ, ಐಟಿ ಮತ್ತಿತರ ಇಲಾಖೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆದಿದೆ. ರಾಜಕೀಯದಲ್ಲಿ ಸೇವೆ ಎಂಬುದು ಬಹಳ ಮುಖ್ಯ ಎಂದರು. ಸ್ವಚ್ಛತೆಯೂ ಒಂದು ಸೇವೆಯಾಗಿದ್ದು, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ಪೊರಕೆ ಹಿಡಿದು ರೈಲ್ವೇ ನಿಲ್ದಾಣವನ್ನು ಗುಡಿಸುತ್ತಿರುವ ವಿಡಿಯೋವನ್ನು ಸಚಿವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
स्वच्छता ही सेवा। pic.twitter.com/tbzO98L6nx
— Ashwini Vaishnaw (@AshwiniVaishnaw) September 17, 2022