ಇತ್ತ ನಾಲಿಗೆ ಹರಿಬಿಟ್ಟಿದ್ದ ರಣವೀರ್ ವಿರುದ್ಧ ಆಕ್ರೋಶಗಳ ಸುರಿಮಳೆ: ಅತ್ತ ನನ್ನ ಸಪೋರ್ಟ್ ಎಂದ್ರು ಉರ್ಫಿ,ಮುನಾವರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯೂಟ್ಯೂಬ್ ರಿಯಾಲಿಟಿ ಶೋ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿದ ಯೂಟ್ಯೂಬರ್ ಮತ್ತು ಪಾಡ್ ಕಾಸ್ಟರ್ ರಣವೀರ್ ಅಲ್ಹಾಬಾದಿಯಾ ವಿರುದ್ಧ ದೂರು ದಾಖಲಿಸಲಾಗಿದೆ

ಎಲ್ಲೆಡೆ ವ್ಯಾಪಕ ಟೀಕೆಗಳು , ಆಕ್ರೋಶಗಳು ವ್ಯಕ್ತವಾಗುತ್ತಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಕೂಡ ರಣವೀರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

ಆದ್ರೆ ಯೂಟ್ಯೂಬರ್ ಗೆ ಉರ್ಫಿ ಜಾವೇದ್ ಬೆಂಬಲ ನೀಡಿದ್ದಾರೆ. ಈ ವಿವಾದದ ನಡುವೆ ನಟಿ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್, ರಣವೀರ್ ಮತ್ತು ಸಮಯ್ ಅವರನ್ನ ಬೆಂಬಲಿಸಿದ್ದಾರೆ. ಅವರ ಹೇಳಿಕೆಗಳು ತುಂಬಾ ಕೊಳಕಾಗಿದ್ದವು, ಆದ್ರೆ ಅಂತಹ ಹೇಳಿಕೆಗಳಿಗಾಗಿ ಅವರನ್ನು ಜೈಲಿಗೆ ಕಳುಹಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಟಿಪ್ಪಣಿ ಉರ್ಫಿ ಬರೆದುಕೊಂಡದ್ದಾರೆ ‘ನಿಮಗೆ ಕೆಲವು ಜನರು ಇಷ್ಟವಾಗುವುದಿಲ್ಲ, ಅವರು ಹೇಳುವ ಅಥವಾ ಮಾಡುವ ವಿಷಯಗಳು ನಿಮಗೆ ಇಷ್ಟವಾಗುವುದಿಲ್ಲ, ಆದರೆ ಇದಕ್ಕಾಗಿ ಅವರು ಜೈಲಿಗೆ ಹೋಗಬೇಕೆಂದು ನೀವು ಒತ್ತಾಯಿಸುತ್ತಿದ್ದೀರಾ ಎಂದು ಬರೆದಿದ್ದಾರೆ.

ನೀವು ಗಂಭೀರವಾಗಿರುವಿರಾ? ನನಗೆ ಗೊತ್ತಿಲ್ಲ. ಸಮಯವು ನಮ್ಮ ಸ್ನೇಹಿತ, ನಾನು ಅದಕ್ಕೆ ಬದ್ಧನಾಗಿರುತ್ತೇನೆ. ಅದಕ್ಕಾಗಿ ಅವರು ಜೈಲಿಗೆ ಹೋಗಲು ಅರ್ಹರು ಎಂದು ನಾನು ಭಾವಿಸುವುದಿಲ್ಲ ಎಂದು ಉರ್ಫಿ ಹೇಳಿದ್ದಾರೆ.

ಹಾಸ್ಯನಟ ಮತ್ತು ಬಿಗ್ ಬಾಸ್ ವಿನ್ನರ್ ಆಗಿದ್ದ ಮುನಾವರ್ ಫಾರೂಕಿ ತಮ್ಮ ಸ್ನೇಹಿತನ ಪರವಾಗಿ ಮಾತಾಡಿದ್ದಾರೆ. ಫಾರೂಕಿ ಅವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಅವರು ತಮ್ಮ ಇನ್ ಸ್ಟಾಗ್ರಾಮ್ ಪೋಸ್ಟ್ ಹಾಕಿಕೊಂಡಿದ್ದಾರೆ.

ರಣವೀರ್ ಮಾಡಿದ ಕೆಟ್ಟ ಕಾಮೆಂಟ್ ಬಗ್ಗೆ ಅನೇಕರು ಕಿಡಿಕಾರಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗವು ಭಾರತದ ಗಾಟ್ ಲ್ಯಾಟೆಂಟ್‌ನಲ್ಲಿ ಹಾಜರಿದ್ದ ಕೆಲವರಿಗೆ ಸಮನ್ಸ್ ಕಳುಹಿಸಿದೆ. ರಣವೀರ್, ಸಮಯ್ ರೈನಾ ಸೇರಿದಂತೆ ಕೆಲವರು ನಿರ್ದಿಷ್ಟ ದಿನಾಂಕದಂದು ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!