ಹೊಸದಿಗಂತ ವರದಿ, ಮೈಸೂರು:
ಮಳೆಯ ನೀರು ಸರಾಗವಾಗಿ ಲಿಂಗಾಬುದಿ ಕೆರೆಗೆ ತಲುಪುವಂತೆ ಮಾಡಬೇಕು ಎಂದು ಪ್ರವಾಸೋದ್ಯಮ ಪರಿಸರ ಹಾಗೂ ಜೀವಿಶಾಸ್ತç ಇಲಾಖೆಯ ಸಚಿವ ಸಿಪಿ ಯೋಗೇಶ್ವರ್ ಅವರು ಸಂಬoಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ಮೈಸೂರಿನ ಲಿಂಗಾಬುಧಿ ಕೆರೆಗೆ ಬೆಳಿಗ್ಗೆ ವಾಕಿಂಗ್ ಬಂದಿದ್ದ ಸಚಿವರೊಂದಿಗೆ ಮೈಸೂರಿನ ಜನಸಾಮಾನ್ಯರು ಕೆರೆಯ ಇತಿಹಾಸದ ಬಗ್ಗೆ ಮೆಲುಕು ಹಾಕಿದರು.
ಕೆರೆ ವೀಕ್ಷಣೆ ಮಾಡಿದ ಸಚಿವರು, ಲಿಂಗಾಬುದಿ ಕೆರೆಗೆ ಮಳೆಯನೀರು ಸರಾಗವಾಗಿ ಹರಿದು ಬರುತ್ತಿಲ್ಲ ಮಳೆಯ ನೀರು ಹರಿದು ಬರುವ ಕಾಲುವೆಗಳು ಕಸಕಡ್ಡಿ ಹಾಗೂ ಪ್ಲಾಸ್ಟಿಕ್ ಸೇರಿದಂತೆ ಅನುಪಯುಕ್ತ ವಸ್ತುಗಳಿಂದ ತುಂಬಿಹೋಗಿದೆ ಹೀಗಾಗಿ ಕಾಲುವೆಗಳಲ್ಲಿ ತುಂಬಿರುವ ಪ್ಲಾಸ್ಟಿಕ್ ಹಾಗೂ ಕಸಕಡ್ಡಿಗಳನ್ನು ತೆರವುಗೊಳಿಸಿ ಈ ಸಂಬoಧ ಸದ್ಯದಲ್ಲೇ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳ ಸಭೆ ಕರೆದು ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪರಿಸರ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಇದ್ದರು.