ರಾಜ್ಯ ಚುನಾವಣಾ ಕಣಕ್ಕೆ ರಮ್ಯಾ: ನಾಳೆಯಿಂದ ನಾಲ್ಕು ಜಿಲ್ಲೆಗಳಲ್ಲಿ ಪ್ರಚಾರ ಶುರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಚುನಾವಣೆ (Karnataka Assembly Elections 2023) ಕಣ ರಂಗೇರುತ್ತಿದ್ದು, ಸ್ಯಾಂಡಲ್​ವುಡ್ ನಟ ನಟಿಯರು ವಿವಿಧ ರಾಜಕೀಯ ಪಕ್ಷಗಳ ಪರ ಪ್ರಚಾರ ನಡೆಸುತ್ತಿದ್ದಾರೆ.

ಈಗಾಗಲೇ ನಟ ಕಿಚ್ಚ ಸುದೀಪ್ (Kichcha Sudeep) ಬಿಜೆಪಿ ಪರ ಪ್ರಚಾರ ಶುರುಮಾಡಿದ್ದು, ಹರ್ಷಿಕಾ ಪೂಣಚ್ಚ, ತಾರಾ ಅನುರಾಧ, ಶೃತಿ ಅವರು ಬಿಜೆಪಿ ಪರ ಮತಬೇಟೆಯಾಡುತ್ತಿದ್ದಾರೆ.

ಕಾಂಗ್ರೆಸ್ ಪರ ದೊಡ್ಡಣ್ಣ, ಸಾಧು ಕೋಕಿಲ ಅವರು ಪ್ರಚಾರ ನಡೆಸುತ್ತಿದ್ದಾರೆ. ಇದೀಗ ಮೋಹಕ ತಾರೆ ರಮ್ಯಾ (Ramya) ಅವರು ಕಾಂಗ್ರೆಸ್ ಪರ ಅಖಾಡಕ್ಕಿಳಿದು ಮತಬೇಟೆಗೆ ಮುಂದಾಗಿದ್ದಾರೆ.

ರಾಜಕೀಯದಿಂದ ಮೂರು ವರ್ಷಗಳಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಂಸದೆಯೂ ಆಗಿರುವ ನಟಿ ರಮ್ಯಾ ಅವರು ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿ ರಾಜ್ಯ ರಾಜಕಾರಣಕ್ಕೆ ಮರು ಎಂಟ್ರಿ ಕೊಡುತ್ತಿದ್ದಾರೆ. ನಾಳೆಯಿಂದ (ಮೇ 1) ವಿಜಯಪುರ, ಮಂಡ್ಯ, ರಾಮನಗರ, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮತಯಾಚನೆ ನಡೆಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!