ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಆರ್​ಸಿಬಿ: ಟಾಸ್ ಗೆದ್ದ ಗುಜರಾತ್,​ ಬ್ಯಾಟಿಂಗ್​ ಆಯ್ಕೆ ​

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಬ್ರಬೋರ್ನ್ ಸ್ಟೇಡಿಯಂನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಗುಜರಾತ್​ ಜೈಂಟ್ಸ್​ ನಡುವೆ ಡಬ್ಲ್ಯೂಪಿಎಲ್​ನ 6ನೇ ಮುಖಾಮುಖಿ ನಡೆಯುತ್ತಿದ್ದು, ಟಾಸ್​ ಗೆದ್ದ ಗುಜರಾತ್​ ನಾಯಕಿ ಸ್ನೇಹ ರಾಣ ತಂಡ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಬೆಂಗಳೂರು ತಂಡ ಒಂದು ಬದಲಾವಣೆ ಮಾಡಿಕೊಂಡಿದ್ದು, ಪೂನಂ ಖೇಮ್ನಾರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ರಾಣಾ ನಾಯಕತ್ವ ಮುಂದುವರಿಕೆ
ಗುಜರಾತ್ ಜೈಂಟ್ಸ್​ ನಾಯಕ್ವವನ್ನು ಆಸ್ಟ್ರೇಲಿಯಾದ ಬೆತ್​ ಮೂನಿ ಅವರಿಗೆ ಕೊಡಲಾಗಿತ್ತು. ಮೊದಲ ಪಂದ್ಯಕ್ಕೂ ಮುನ್ನ ಗಾಯಗೊಂಡ ನಾಯಕಿ ಬೆತ್​ ಮೂನಿ ಬದಲಾಗಿ ರಾಣಾಗೆ ನಾಯಕತ್ವ ನೀಡಲಾಗಿತ್ತು. ಇನ್ನು, ಮೂನಿ ಚೇತರಿಸಿಕೊಳ್ಳದ ಕಾರಣ ರಾಣಾ ನಾಯಕಿಯಾಗಿ ಮುಂದುವರೆದಿದ್ದಾರೆ.

ಎರಡು ಸೋಲು ಕಂಡಿರುವ ಉಭಯ ತಂಡಗಳು
ಗುಜರಾತ್​ ಜೈಂಟ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಒಂದು ಗೆಲುವನ್ನು ಕಂಡಿಲ್ಲ. ಇಂದಿನ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಚೊಚ್ಚಲ ಗೆಲುವಾಗಲಿದೆ. ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಸಿಗಲಿದೆ. ಹೀಗಾಗಿ ಉಭಯ ತಂಡಗಳು ಗೆಲುವಿನ ಸೂತ್ರ ಹುಡುಕುತ್ತಿದೆ.

ಉಚಿತ ಪ್ರವೇಶ
ಅಂತಾರಾಷ್ಟ್ರೀಯ ಮಹಿಳಾ ದಿನದ ವಿಶೇಷದ ಪ್ರಯುಕ್ತ ಇಂದು ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ ಅವಕಾಶವನ್ನು ವುಮೆನ್ಸ್​ ಪ್ರೀಮಿಯರ್​ ಲೀಗ್​ನಿಂದ ಮಾಡಿಕೊಡಲಾಗಿದೆ. ಈ ಬಗ್ಗೆ ಮುಂಬೈ ಎದುರು ಆರ್​ಸಿಬಿ ಪಂದ್ಯ ಆಡುವಾಗ ಪ್ರಕಟ ಮಾಡಲಾಗಿತ್ತು. ಅಲ್ಲದೇ, ಡಬ್ಲ್ಯೂಪಿಎಲ್​ನ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!