ಸಿರಾಜ್, ಕೃಷ್ಣ ಬೌಲಿಂಗ್ ದಾಳಿಗೆ ಎಡವಿದ ಆರ್‌ಸಿಬಿ: ಗುಜರಾತ್ ಗೆಲುವಿಗೆ 170 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿರಾಜ್ ಹಾಗೂ ಕೃಷ್ಣ ಮಾರಕ ಬೌಲಿಂಗ್ ದಾಳಿಗೆ ತವರಿನಲ್ಲೇ ಆರ್‌ಸಿಬಿ ಎಡವಿದ್ದು, ಗುಜರಾತ್ ಟೈಟಾನ್ಸ್ ಕೇವಲ 170 ರನ್​ಗಳ ಸಾಧಾರಣ ಗುರಿ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಆರ್​ಸಿಬಿ 2ನೇ ಓವರ್​ನಲ್ಲಿ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಅದ್ರ ಬೆನ್ನಲ್ಲೇ ಪಿಲಿಫ್ ಸಾಲ್ಟ್ 14 ರನ್ ಸಿಡಿಸಿ ನಿರ್ಗಮಿಸಿದರು. ದೇವದತ್ ಪಡಿಕ್ಕಲ್ ಕೇವಲ 4 ರನ್ ಸಿಡಿಸಿದರು. ನಾಯಕ ರಜತ್ ಪಾಟೀದಾರ್ 12 ರನ್ ಸಿಡಿಸಿ ಔಟಾದರು. 42 ರನ್‌ಗೆ ಆರ್‌ಸಿಬಿ 4 ವಿಕೆಟ್ ಕಳೆದುಕೊಂಡಿತ್ತು.

ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಜಿತೇಶ್ ಶರ್ಮಾ ಜೊತೆಯಾಟದಿಂದ ಆರ್‌ಸಿಬಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿಂದ ಹೊರಬಂತು. ಜಿತೇಶ್ ಶರ್ಮಾ 33 ರನ್ ಸಿಡಿಸಿದರು. ಲಿವಿಂಗ್‌ಸ್ಟೋನ್ ಬ್ಯಾಟಿಂಗ್ ಮುಂದುವರಿಸಿದರೆ, ಕ್ರುನಾಲ್ ಪಾಂಡ್ಯ ಅಬ್ಬರಸಿಲಿಲ್ಲ. 5 ರನ್ ಸಿಡಿಸಿ ನಿರ್ಗಮಿಸಿದರು.

ಲಿಯಾಮ್ ಲಿವಿಂಗ್ ಸ್ಟೋನ್ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ಟಿಮ್ ಡೇವಿಡ್ 32 ರನ್ ಸಿಡಿಸಿದರು. ಈ ಮೂಲಕ 169 ರನ್ ಸಿಡಿಸಿತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!