ಧಾರ್ಮಿಕ ಪುಸ್ತಕ ಅಪವಿತ್ರಗೊಳಿಸಿದ ಆರೋಪ: ಕಲ್ಲಿನಿಂದ ಹೊಡೆದು ವ್ಯಕ್ತಿ ಹತ್ಯೆ, 62 ಮಂದಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಧಾರ್ಮಿಕ ಪುಸ್ತಕವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಹೊಡೆದು ಕೊಲ್ಲಲಾಗಿದೆ.

ಕಲ್ಲಿನಿಂದ ಹೊಡೆದು ಕೊಂದು ಮರಕ್ಕೆ ನೇತುಹಾಕಲಾಗಿದೆ. ಇದು ರಾಷ್ಟ್ರವ್ಯಾಪಿ ಆಕ್ರೋಶವನ್ನು ಹುಟ್ಟುಹಾಕಿದ್ದು, 62  ಮಂದಿಯನ್ನು ಬಂಧಿಸಲಾಗಿದೆ. ಲಾಹೋರ್‌ನಿಂದ 267ಕಿ.ಮೀ. ದೂರದಲ್ಲಿರುವ ಖನೇವಾಲ್ ಜಿಲ್ಲೆಯ ಜಂಗಲ್ ದೇರಾವಾಲಾ ಗ್ರಾಮದಲ್ಲಿ ಘಟನೆ ನಡೆದಿದೆ. ಸಂಜೆಯ ಪ್ರಾರ್ಥನೆ ನಂತರ ವ್ಯಕ್ತಿಯೊಬ್ಬರು ಪವಿತ್ರ ಕುರಾನ್‌ನ ಪುಟಗಳನ್ನು ಹರಿದು ಹಾಕಿದ್ದಾರೆ.

ಘಟನೆಗೂ ಮುನ್ನವೇ ಪೊಲೀಸರು ಗ್ರಾಮಕ್ಕೆ ಆಗಮಿಸಿದ್ದು, ಗುಂಪನ್ನು ತಡೆಯಲು ಸಾಧ್ಯವಾಗಿಲ್ಲ. ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಗುಂಪು ಆತನನ್ನು ಸುಪರ್ದಿಗೆ ಪಡೆದು ಕಲ್ಲಿನಿಂದ ಹೊಡೆದು, ಮರಕ್ಕೆ ಕಟ್ಟಿ ಕೊಂದಿದ್ದಾರೆ. ಮೃತದೇಹವನ್ನು ಮರದಿಂದ ಕೆಳಗೆ ಇಳಿಸಲು ಯತ್ನಿಸಿದ ಪೊಲೀಸರಿಗೂ ಕಲ್ಲಿನಿಂದ ಹೊಡೆದಿದ್ದಾರೆ ಎಂದು ಅಧಿಕಾರಿ ಮುಹಮ್ಮದ್ ಅಮೀನ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!