ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗಳ ಹುಟ್ಟುಹಬ್ಬ ಆಚರಣೆಗೆ ಸುವರ್ಣಸೌಧವನ್ನು ಬಾಡಿಗೆಗೆ ಕೊಡಬೇಕು ಎಂದು ವಕೀಲರೊಬ್ಬರು ವಿಧಾನ ಪರಿಷತ್ ಸಭಾಪತಿಯವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಗೋಕಾಕದ ವಕೀಲ ಮಲ್ಲಿಕಾಜುನ ಚೌಕಾಶಿ ಸಭಾಪತಿಗೆ ಪತ್ರ ಬರೆದಿದ್ದು, ತಮ್ಮ ಮಗಳ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಸುವರ್ಣಸೌಧ ಬಾಡಿಗೆಗೆ ಬೇಕು ಎಂದಿದ್ದಾರೆ.
ಸುವರ್ಣಸೌಧ 15ದಿನ ಮಾತ್ರ ಜನರಿಂದ ತುಂಬಿರುತ್ತದೆ. ಉಳಿದ ಸಮಯ ಖಾಲಿ ಇರುತ್ತದೆ. ಹಾಗಾಗಿ ಶುಭ ಸಂದರ್ಭಗಳಿಗೆ ಸುವರ್ಣಸೌಧ ಬಾಡಿಗೆಗೆ ನೀಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನನ್ನ ಪುತ್ರಿ ಮಣಿಶ್ರೀಗೆ ಇದೀಗ ಆರು ವರ್ಷ. ಈಗ ಅವರಳು ಒಂದನೇ ತರಗತಿಗೆ ಸೇರುತ್ತಾಳೆ. ಅವಳ ಜೀವನದಲ್ಲಿ ಇದು ಪ್ರಮುಖ ಘಟ್ಟ. ಹೀಗಾಗಿ ಅವಳ ಹುಟ್ಟುಹಬ್ಬ ಚೆನ್ನಾಗಿ ಆಚರಿಸಬೇಕು.
ದೊಡ್ಡ ಬಂಗಲೆಯಂತೆ ಕಾಣುವ ಸುವರ್ಣಸೌಧದಲ್ಲಿ ಮಗಳ ಹುಟ್ಟುಹಬ್ಬ ಆಚರಿಸಬೇಕು. ಸಭಾಂಗಣವನ್ನು ಬಾಡಿಗೆ ನೀಡಿ ಎಂದು ಮನವಿ ಮಾಡಿದ್ದಾರೆ. ಈ ರೀತಿ ಬಾಡಿಗೆ ನೀಡುತ್ತಾ ಹೋದರೆ ಸರ್ಕಾರಕ್ಕೆ ಆರ್ಥಿಕವಾಗಿ ಲಾಭ ಆಗಲಿದೆ. ಈ ವಿಷಯದ ಬಗ್ಗೆ ಚರ್ಚಿಸಿ ಉತ್ತರ ನೀಡಿ ಎಂದಿದ್ದಾರೆ.