ಹೊಸದಿಗಂತ ವರದಿ, ಅಂಕೋಲಾ:
ಪಡಿತರಕ್ಕೆ ವಿತರಿಸುವ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹ ಮಾಡಿಟ್ಟ ಮನೆ ಮತ್ತು ಗೋಡೌನ್ ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಪಡಿತರ ಅಕ್ಕಿ ದಾಸ್ತಾನು ವಶಪಡಿಸಿಕೊಂಡ ಘಟನೆ ಅಂಕೋಲಾ ತಾಲೂಕಿನ ಕೇಣಿಯಲ್ಲಿ ನಡೆದಿದೆ.
ಕೇಣಿಯ ಪೋಸ್ಟ್ ಕಚೇರಿ ಎದುರುಗಡೆ ಇರುವ ಕಟ್ಟಡದಲ್ಲಿ ಸಂಗ್ರಹಿಸಿ ಇಡಲಾಗಿದ್ದ ಸುಮಾರು 95 ಕ್ವಿಂಟಲ್ ಪಡಿತರ ಅಕ್ಕಿ, 19 ಕ್ವಿಂಟಲ್ ಕುಚ್ಚಕ್ಕಿ,50 ಕೆ.ಜಿ ಗೋಧಿ,10 ಕೆ.ಜಿ ತೊಗರಿಬೇಳೆ ವಶಕ್ಕೆ ಪಡೆಯಲಾಗಿದೆ.
ಅಕ್ಕಿ ದಾಸ್ತಾನು ಮಾಡಿಟ್ಟ ಸ್ಥಳದಲ್ಲಿ
ಚೀಲ ಪ್ಯಾಕ್ ಮಾಡುವ ಯಂತ್ರ ಸಹ ಪತ್ತೆಯಾಗಿದ್ದು ಇಲ್ಲಿಂದ ದೊಡ್ಡ ಪ್ರಮಾಣದಲ್ಲಿ ಅಕ್ಕಿ ಮಾರಾಟದ ದಂಧೆ ನಡೆಯುತ್ತಿರುವ ಸಾಧ್ಯತೆ ಇದ್ದಂತಿದೆ.
ಅಂಕೋಲಾ ತಹಶೀಲ್ಧಾರ ಉದಯ ಕುಂಬಾರ,ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಆಹಾರ ನಿರೀಕ್ಷಕರು, ಕಂದಾಯ ಇಲಾಖೆ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದು ಕೇಣಿ ನಿವಾಸಿ ಇಂದಿರಾ ನಾಯ್ಕ ಎನ್ನುವವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ವಶಪಡಿಸಿಕೊಂಡ ಅಕ್ಕಿ ಮತ್ತಿತರ ಧಾನ್ಯಗಳನ್ನು ಅಂಕೋಲಾ ಎ.ಪಿ.ಎಂ.ಸಿ ಧಾನ್ಯ ಸಂಗ್ರಹಣಾ ಉಗ್ರಾಣದಲ್ಲಿ ದಾ