ಹೊಸದಿಗಂತ ವರದಿ,ಕಲಬುರಗಿ:
ರಾಯಚೂರಿನ ನ್ಯಾಯಾಲಯದಲ್ಲಿ ನಡೆದ ಘಟನೆ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದ ನಿಮಿತ್ತ, ಮನವಿ ಕೊಡುವ ವಿಚಾರದಲ್ಲಿ ನ್ಯಾಯವಾದಿಗಳ ಮಧ್ಯೆ ಗಲಾಟೆ ನಡೆದಿದೆ.
ಗುಲಬರ್ಗಾ ನ್ಯಾಯವಾದಿಗಳ ಸಂಘದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೆಲ ವಕೀಲರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಇನ್ನೊಂದೆಡೆ ಕೆಲ ವಕೀಲರು ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಕೊಡೋಣ ಎಂದು ಮಾತುಗಳು ನಡೆದ ಸಂದರ್ಭದಲ್ಲಿ ಗಲಾಟೆ ಪ್ರಾರಂಭವಾಗಿದೆ.
ಜಿಲ್ಲಾ ಬಾರ್ ಕೌನ್ಸಿಲ್ ಅಧ್ಯಕ್ಷ ಹಾಗೂ ಇನ್ನೂ ಕೆಲ ವಕೀಲರ ನಡುವೆ ಗಲಾಟೆ ಪ್ರಾರಂಭವಾಯಿತು. ಕೆಲ ಹೊತ್ತಿನ ನಂತರ ಮತ್ತೆ, ಎಲ್ಲಾ ವಕೀಲರು ಕೈ ಕೈ ಮೀಲಾಯಿಸಿ ಹೊರ ನಡೆದರು.