ಹೊಸದಿಗಂತ ವರದಿ ಶಿವಮೊಗ್ಗ :
ನಗರದ ಆಯನೂರು ಗೇಟ್ ನಿವಾಸಿ ರೌಡಿ ಶೀಟರ್ ಅಣ್ಣಪ್ಪ ಯಾನೆ ಹಂದಿ ಅಣ್ಣಿಯನ್ನು ಇಂದು ಬೆಳಗ್ಗೆ ವಿನೋಬನಗರದ ಪೊಲೀಸ್ ಚೌಕಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಲವ, ಕುಶ ಎಂಬ ಅವಳಿ ರೌಡಿ ಸಹೋದರರನ್ನು 2006 ರಲ್ಲಿ ನಗರದ ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಕಚೇರಿ ಎದುರಿನ ಅಯಿಲ್ ಅಂಗಡಿಯಲ್ಲಿ ಬೆಳ್ಳಂಬೆಳಗ್ಗೆ ಹತ್ಯೆ ಮಾಡಿ ಜೈಲು ಸೇರಿದ್ದ.
ಆಗಿನಿಂದ ಶಿವಮೊಗ್ಗದ ಪಾತಕ ಲೋಕದಲ್ಲಿ ಮೆರೆಯುತ್ತಿದ್ದ ಈತನ ಮೇಲೆ 8 ಕೊಲೆ, ಕೊಲೆ ಯತ್ನ, ಹಫ್ತಾ ವಸೂಲಿ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿದ್ದವು. ಇತ್ತೀಚೆ ಬೇಲ್ ಮೇಲೆ ಜೈಲಿನಿಂದ ಹೊರ ಬಂದಿದ್ದ
ಈತನ ಚಲನವಲನ ಗಮನಿಸುತ್ತಿದ ಹಂತಕರು ಕಾರಿನಲ್ಲಿ ಬಂದು ಒಬ್ಬನೇ ಇದ್ದ ಹಂದಿ ಅಣ್ಣಿಯನ್ನು ನಡು ರಸ್ತೆಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.