ನಿಜವಾದ ಅಭಿಮಾನ..! ಮಳೆಯಲ್ಲೂ ಅಭಿಮಾನಿಗಳಿಗಾಗಿ ಮಿಡಿದ ಸಾಯಿಪಲ್ಲವಿ ಮನಸು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಣಾ ಮತ್ತು ಸಾಯಿಪಲ್ಲವಿ ಅಭಿನಯದ ವಿರಾಟಪರ್ವಂ ಜೂನ್ 17 ರಂದು ಬಿಡುಗಡೆಯಾಗಲಿದೆ. ಭಾನುವಾರ ಸಂಜೆ ಕರ್ನೂಲ್‌ನಲ್ಲಿ ವಿರಾಟಪರ್ವಂ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸಾಯಿಪಲ್ಲವಿ ಕ್ರೇಜ್ ಬಗ್ಗೆ ಎಲ್ಲರಿಗೂ ಗೊತ್ತು. ಆಕೆಗೆ ಸಾಕಷ್ಟು ಅಭಿಮಾನಿಗಳಿದ್ದಾರೆ, ತನ್ನ ಸಹಜ ನಟನೆ, ಅದ್ಭುತ ನೃತ್ಯ, ತನ್ನ ಒಳ್ಳೆತನದಿಂದ ಅನೇಕ ನಾಯಕಿಯರಿಗಿಂತ ಭಿನ್ನವಾಗಿ ನಿಂತು ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಈ ಬಾರಿ ಅಭಿಮಾನಿಗಳು ತಮ್ಮ ಅಭಿಮಾನವನ್ನು ತೋರಿಸಿದ್ದು ಮಾತ್ರವಲ್ಲದೆ ಸಾಯಿ ಪಲ್ಲವಿ ಅವರ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ. ಕರ್ನೂಲಿನಲ್ಲಿ ನಡೆದ ವಿರಾಟ್ ಪರ್ವಂ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಕಾರ್ಯಕ್ರಮಕ್ಕೆ ಅಡ್ಡಿಯುಂಟಾಗಿದೆ.ವಿಪರೀತ ಮಳೆ, ಗಾಳಿಯಿದ್ದರೂ ಸಾಯಿ ಪಲ್ಲವಿಗಾಗಿ ಕರ್ನೂಲ್ ಸುತ್ತಮುತ್ತಲಿನ ಅನೇಕ ಅಭಿಮಾನಿಗಳು ಕಾರ್ಯಕ್ರಮಕ್ಕೆ ಬಂದಿದ್ದರು.

ಕಾರ್ಯಕ್ರಮವನ್ನು ಮೊಟಕುಗೊಳಿಸಿವುದಾಗಿ ಆಯೋಜಕರು ಕೇಳಿದರು. ಅದಕ್ಕೆ ಅನುಮತಿ ನೀಡದ ನಟಿ, ಅಭಿಮಾನಿಗಳಿಗೆ ನಿರಾಸೆ ಮಾಡದೆ ಜೋರು ಮಳೆಯಲ್ಲಿಯೇ ನಿಂತು ಸಾಯಿ ಪಲ್ಲವಿ ಮಾತನಾಡಿದ್ದಾರೆ. ತನಗಾಗಿ ಬಂದ ಅಭಿಮಾನಿಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಮಳೆಯಲ್ಲಿಯೇ ಸಾಯಿ ಪಲ್ಲವಿ ಅಭಿಮಾನಿಗಳ ಪರವಾಗಿ ಮಾತನಾಡುವುದನ್ನು ನೋಡಿದ ಕೆಲವರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಅಷ್ಟು ಜೋರಾದ ಮಳೆಯಲ್ಲೂ ಅಭಿಮಾನಿಗಳು ಶಾಂತ ಚಿತ್ತರಾಗಿ ಆಕೆಯ ಮಾತುಗಳನ್ನು ಕೇಳಿದ್ದಾರೆ. ಸಾಯಿ ಪಲ್ಲವಿ ಫ್ಯಾನ್ಸ್ ಕ್ರೇಜ್ ನೋಡಿ ಉಳಿದ ಕಲಾವಿದರೆಲ್ಲಾ ಶಾಕ್ ಆಗಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!