ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನವರಿಯಲ್ಲಿ ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಚೂರಿ ಇರಿತದ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಎಲ್ಲವೂ ಗುಮಾನಿ ಎನ್ನುವ ರೀತಿಯಲ್ಲಿ ಈ ಘಟನೆ, ಪೊಲೀಸ್ ಪ್ರಕರಣ, ಅರೆಸ್ಟ್ ಎಲ್ಲವೂ ನಡೆದಿತ್ತು.
ಇದರ ನಡುವೆಯೇ ಇದೀಗ ಸೈಫ್ ಅಲಿ ಖಾನ್ ಕತಾರ್ನಲ್ಲಿ ಮತ್ತೊಂದು ಬಂಗಲೆ ಖರೀದಿಸಿದ್ದಾರಂತೆ. ಈ ಬಗ್ಗೆ ಮಾತನಾಡಿರುವ ಅವರು, ನಾನು ಕತಾರ್ನಲ್ಲಿ ಎರಡನೆಯ ಮನೆ ಖರೀದಿಸಿದ್ದೇನೆ, ಅಲ್ಲಿಯೇ ಸೇಫ್ ಎನ್ನಿಸುತ್ತದೆ ಎಂದಿದ್ದಾರೆ.
ಮುಂಬೈನಲ್ಲಿ ಇರುವ ಅವರ ಮನೆಯ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. ಆದರೆ ನೆಟ್ಟಿಗರು ಸೈಫ್ ನ ಈ ಹೇಳಿಕೆಗೆ ಗರಂ ಆಗಿದ್ದು, ಸರಿಯಾಗಿ ನಿರ್ಧಾರ ಮಾಡಿರುವೆ, ಭಾರತ ಬಿಟ್ಟು ತೊಲಗು, ಬೇಕಿದ್ರೆ ಪಾಕಿಸ್ತಾನಕ್ಕೆ ಹೋಗು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವ್ರು ಭಾರತದ ಸಿನಿಮಾಗಳಲ್ಲಿ ಯಾಕೆ ನಟಿಸ್ತಾ ಇರುವೆ? ಇಲ್ಲಿಯ ಅನ್ನ ಉಂಡು, ಇಲ್ಲಿ ಉಸಿರಾಡಿ ಕತಾರ್ ಸೇಫ್ ಎನ್ನಿಸಿದ್ರೆ, ಮತ್ಯಾಕೆ ಇಲ್ಲಿ ಇನ್ನೂ ಇದ್ದೀಯಾ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಸೈಫ್ ಅಲಿಯ ಈ ಮಾತು ನೆಟ್ಟಿಗರನ್ನು ಕೆರಳಿಸಿದೆ.