ನಿನಗೂ ಅದೇ ಗತಿ ಬರುತ್ತೆ: ಸಲ್ಮಾನ್‌ ಖಾನ್ ಪರ ವಕೀಲರಿಗೆ ಬೆದರಿಕೆ ಪತ್ರ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಹೀರೋ ಸಲ್ಮಾನ್ ಖಾನ್ ಪರ ವಕೀಲ ಎಚ್.ಸರಸ್ವತ್ ಅವರನ್ನು ಕೊಲೆ ಮಾಡುತ್ತೇವೆಂದು ಕೆಲ ಪುಂಡರು ಬೆದರಿಕೆ ಪತ್ರ ಕಳಿಸಿದ್ದಾರೆ. ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾಗೆ ಏನಾಯಿತೋ ಅದೇ ಗತಿ ಸಾರಸ್ವತ್ ಅವರಿಗೂ ಆಗುತ್ತದೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಮೂಸೆವಾಲಾ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಸದ್ಯ ತಿಹಾರ್ ಜೈಲಿನಲ್ಲಿರುವುದು ಗೊತ್ತೇ ಇದೆ. ಪತ್ರದಲ್ಲಿ ಆತನ ಮತ್ತು ಮತ್ತೊಬ್ಬ ಆರೋಪಿ ಗೋಲ್ಡಿ ಬ್ರಾರ್ ಹೆಸರನ್ನು ಸೂಚಿಸುವ ಅಕ್ಷರಗಳು ಪತ್ತೆಯಾಗಿವೆ.

ಈ ಪತ್ರವನ್ನು ಲಾರೆನ್ಸ್ ಬಿಷ್ಣೋಯ್ ಅವರ ಅನುಯಾಯಿಗಳು ಕಳುಹಿಸಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ವಕೀಲ ಎಚ್.ಸರಸ್ವತ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಸ್ತುತ ವಕೀಲರಿಗೆ ಭದ್ರತೆ ಒದಗಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದು, ಪತ್ರದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!