ಸಮೀರ್ ಕೊಲೆ ಮಾಡಲು ಹೋಗಿರಲಿಲ್ಲ: ಸಹೋದರಿ ಸಬಾ ಶೇಖ್

ಹೊಸದಿಗಂತ ವರದಿ,ಶಿವಮೊಗ್ಗ :

ಬಜರಂಗ ದಳದ ಸುನೀಲ್ ನನ್ನನ್ನು ಪದೇ ಪದೇ ಚುಡಾಯಿಸುತ್ತಿದ್ದನು. ದಾರಿಯಲ್ಲಿ ಹೋಗುವಾಗ ಅಡ್ಡಗಟ್ಟಿ ಸತಾಯಿಸುತ್ತಿದ್ದು, ಬುರ್ಕಾ ತೆಗೆಯುವಂತೆ ಒತ್ತಾಯಿಸುತ್ತಾ, ಮತಾಂತರವಾಗುವಂತೆ ಹೇಳುತ್ತಿದ್ದ  ಎಂದು ಸಮೀರ್ ಸಹೋದರಿ ಸಬಾ ಶೇಖ್ ದೂರಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದೇ ಪದೇ ನನ್ನನ್ನು ಚುಡಾಯಿಸುತ್ತಿದ್ದರಿಂದ ನಾನು ನನ್ನ ಸಹೋದರ ಸಮೀರ್‌ಗೆ ವಿಷಯ ತಿಳಿಸಿದ್ದೇನೆ. ಅವನು ಸುನೀಲ್‌ಗೆ ಬುದ್ಧಿ ಹೇಳಲು ಹೋಗಿದ್ದನೇ ವಿನಃ ಕೊಲೆ ಮಾಡಲು ಹೋಗಿರಲಿಲ್ಲ ಎಂದು ಹೇಳಿದರು.
ನನ್ನ ಅಣ್ಣ ಸಮೀರ್ ಮೇಲೆ ಈತನಕ ಯಾವುದೇ ಪ್ರಕರಣವಿಲ್ಲ. ನನ್ನ ಅಣ್ಣ ಸಮೀರ್ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಅನಗತ್ಯವಾಗಿ ಸಣ್ಣ ವಿಷಯವನ್ನು ದೊಡ್ಡದು ಮಾಡಿ ಅವನನ್ನು ತಪ್ಪಿಗೆ ಸಿಲುಕಿಸಬೇಡಿ ಎಂದು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!