ಹೊಸದಿಗಂತ ವರದಿ, ಚಿಕ್ಕೋಡಿ:
ಚಿಕ್ಕೋಡಿ ತಾಲೂಕಿನ ಚಿಂಚನಿ ಗ್ರಾಮದ ಸರಕಾರಿ ಕನ್ನಡ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಗುರುವಾರ ಶಾಲೆ ಮುಚ್ಚಿದ ನಂತರ ಯಾರೋ ಕಿಡಿಗೇಡಿಗಳು ಶಾಲಾ ಆವರಣದಲ್ಲಿರುವ ವಿದ್ಯಾ ದೇವತೆ ಸರಸ್ವತಿ ದೇವಿ ಮೂರ್ತಿಯನ್ನು ಧ್ವಂಸಗೊಳಿಸಿದ್ದು, ಘಟನೆಯಿಂದ ಗ್ರಾಮಸ್ಥರಲ್ಲಿ ಕೆಲ ಸಂಶಯ ಮನೆ ಮಾಡಿದೆ.
ಯಾರೋ ಕಿಡಿಗೇರಿ ಸಂಜೆ ಹೊತ್ತು ಯಾರು ಇಲ್ಲದ ಸಮಯದಲ್ಲಿ ಈ ಕೃತ್ಯ ಹೀನ ಎಸಗಿದ್ದು ಸ್ಥಳಿಯ ಮುಖಂಡರು ಶಾಲಾ ಆಡಳಿತ ಮಂಡಳಿ ಘಟನೆ ವಿರುದ್ದ ದೂರು ದಾಖಲಿಸಿದ್ದಾರೆ. ಕೃತ್ಯ ಎಸಗಿದವರನ್ನು ಸೂಕ್ತ ಕ್ರಮಕ್ಕೆ ಒಳಪಡಿಸುವಂತೆ ವನವಿ ಮಾಡಿದ್ದಾರೆ.
ಇನ್ನೂ ಸ್ಥಳೀಯ ಚಿಕ್ಕೋಡಿ ಪೋಲಿಸ್ ಅಧಿಕಾರಿಗಳು ಘಟನಾಸ್ಥಳಕ್ಕೆ ಬಂದು ಪರಿಶಿಲಿಸಿದರು.