ಇಂದಿನಿಂದ ಸುತ್ತೂರು ಜಾತ್ರಾ ಮಹೋತ್ಸವ: ಅದ್ಧೂರಿ ಜಾತ್ರೆಗೆ ಸಜ್ಜಾದ ನಂಜನಗೂಡು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರಿನ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ ಎರಡು ವರ್ಷದ ನಂತರ ಅದ್ಧೂರಿ ಸುತ್ತೂರು ಜಾತ್ರಾ ಮಹೋತ್ಸವ ಆರಂಭವಾಗಲಿದೆ.

ಸಂಗೀತ, ಕ್ರೀಡೆ, ಕೃಷಿಮೇಳ ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

ಪ್ರತಿ ಬಾರಿ ಆಕರ್ಷಣೆ ಹಸುಗಳ ಜಾತ್ರೆ ಈ ಬಾರಿ ಇರುವುದಿಲ್ಲ. ಚರ್ಮಗಂಟು ರೋಗ ಹಿನ್ನೆಲೆ ಹಸುಗಳ ಜಾತ್ರೆಯನ್ನು ರದ್ದು ಮಾಡಲಾಗಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಜಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಸುತ್ತೂರು ಮಠದಲ್ಲಿ ಎರಡು ಲಕ್ಷ ಜನರಿಗೆ ಅನ್ನದಾಸೋಹಕ್ಕೆ ತಯಾರಿ ನಡೆದಿದೆ. ಸಿಎಂ ಹಾಗೂ ಸಚಿವರು ಭಾಗಿ ಹಿನ್ನೆಲೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!