ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಗಾನದಿಯಲ್ಲಿ ದೋಣಿ ಮುಗುಚಿ ಬಿದ್ದಿದ್ದು, ಮೂವರು ಮೃತಪಟ್ಟಿದ್ದಾರೆ. ಭಾಗಲ್ಪುರದಲ್ಲಿ ಅವಘಡ ಸಂಭವಿಸಿದ್ದು, ದೋಣಿಯಲ್ಲಿದ್ದ ಇನ್ನು ಮೂವರು ನಾಪತ್ತೆಯಾಗಿದ್ದಾರೆ. ಇಬ್ಬರು ಮಕ್ಕಳು ಹಾಗೂ ಮಹಿಳೆ ಮೃತದೇಹ ಪತ್ತೆಯಾಗಿದೆ.
ದೋಣಿಯಲ್ಲಿ ಸಾಕಷ್ಟು ಮಂದಿಯಿದ್ದು, ಕಾಳಿ ಪೂಜೆಗಾಗಿ ಕೆಲವರು ತೆರಳುತ್ತಿದ್ದರು. ಇನ್ನು ಹಲವರು ಕೆಲಸ ಮುಗಿಸಿ ತಮ್ಮ ಮನೆಗಳಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಗಂಗಾನದಿಯಲ್ಲಿ ದೋಣಿ ಮಗುಚಿದ ತಕ್ಷಣ ಈಜು ಬಲ್ಲವರು ಈಜಿದ್ದಾರೆ, ಇನ್ನುಳಿದವರು ಬದುಕಲು ಪರದಾಡುತ್ತಿದ್ದರು ಎನ್ನಲಾಗಿದೆ. ನಾಪತ್ತೆಯಾದವರಿಗಾಗಿ ತೀವ್ರ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.