ಹೊಸ ದಿಗಂತ ವರದಿ, ಶಿವಮೊಗ್ಗ :
ಗಾಂಜಾ ಮಾರಾಟ ಮಾಡಲು ಸಾಗಿಸುತ್ತಿದ್ದ ಆರು ಆರೋಪಿಗಳನ್ನು ಬಂಧಿಸಿ 1 ಕೆ.ಜಿ. ಗಾಂಜಾ, 3 ತಲ್ವಾರ್ ಹಾಗೂ 2,585 ನಗದು ಹಣ ಶುಕ್ರವಾರ ವಶಕ್ಕೆ ಪಡೆಯಲಾಗಿದೆ.
ಅಣ್ಣಾನಗರದ ಅಬ್ದುಲ್ ಮುನಾಫ್ (22) ಮಿಳಘಟ್ಟದ ಅಸಾದಿ @ ಅಸಾದುಲ್ಲಾ ಖಾನ್(22), ಮಂಜುನಾಥ ಬಡಾವಣೆಯ ಮಹಮದ್ ಅನಾಸ್(18), ಟಿಪ್ಪು ನಗರದ ಸಯ್ಯದ್ ಇಬ್ರತ್ ಖಾನ್ (19), ಸಾದತ್ ಇಮ್ತಿಯಾಜ್(23) ಮತ್ತು ಗುಲಾಮ್ ನಾಜ್(34) ಬಂಧಿತ ಆರೋಪಿಗಳಾಗಿದ್ದಾರೆ.
ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.