ಹಿರಿಯ ನಟ ಪರೇಶ್‌ ರಾವಲ್‌ಗೆ ಕೋಲ್ಕತ್ತಾ ಪೊಲೀಸರಿಂದ ಸಮನ್ಸ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್‌ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಬೆಂಗಾಲಿಗಳ ಬಗ್ಗೆ ನೀಡಿದ್ದ ಹೇಳಿಕೆಯ ಕುರಿತು ನಟ ಹಾಗೂ ಬಿಜೆಪಿ ನಾಯಕ ಪರೇಶ್ ರಾವಲ್‌ಗೆ ಕೋಲ್ಕತ್ತಾ ಪೊಲೀಸರು ವಿಚಾರಣೆಗೆ ಹಾಜರಾಗಲು ಸಮನ್ಸ್‌ ನೀಡಿದ್ದಾರೆ.

ಡಿಸೆಂಬರ್ 12 ರಂದು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.

ಪರೇಶ್ ರಾವಲ್ ವಿರುದ್ಧ ಮಾಜಿ ಸಂಸದ ಹಾಗೂ ಸಿಪಿಐ(ಎಂ) ಮುಖಂಡ ಮೊಹಮ್ಮದ್‌ ಸಲೀಂ ದೂರು ದಾಖಲಿಸಿದ್ದು, ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ಆರೋಪ ಹೊರಿಸಬೇಕೆಂದು ಬಯಸಿದ್ದರು. ಇದರಲ್ಲಿ ದ್ವೇಷ ಉತ್ತೇಜಿಸುವುದು, ಉದ್ದೇಶಪೂರ್ವಕ ಅವಮಾನ, ಸಾರ್ವಜನಿಕ ಕಿಡಿಗೇಡಿತನ ಇತ್ಯಾದಿ ಆರೋಪಗಳು ಸೇರಿದ್ದವು.

ಅವರ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡ ಬಳಿಕ ಹಿರಿಯ ನಟ ಪರೇಶ್‌ ರಾವಲ್‌ ಕ್ಷಮೆ ಕೇಳಿದರು ಹಾಗೂ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!