ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣ:9 ದಿನಗಳಲ್ಲೇ ಪೂರ್ಣ ತನಿಖಾ ವರದಿ ನ್ಯಾಯಲಯಕ್ಕೆ ಸಲ್ಲಿಕೆ

ಹೊಸದಿಗಂತ ವರದಿ ಕಲಬುರಗಿ: 

ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ನ.1ರಂದು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣದ
ತನಿಖೆ ನಡೆಸಿ, ಸಾಕ್ಷಿ ಕಲೆ ಹಾಕಿ ಕೇವಲ 9ದಿನಗಳ ಒಳಗಾಗಿ ಇದೆ ನ.10 ರಂದು ಬಾಲ ನ್ಯಾಯ ಮಂಡಳಿ ಮುಂದೆ ಪೂರ್ಣಪ್ರಮಾಣದ ವರದಿ ಸಲ್ಲಿಸಲಾಗಿದೆ ಎಂದು ಎಸ್ಪಿ ಇಶಾ ಪಂತ್ ತಿಳಿಸಿದರು.

ಪ್ರಕರಣದಲ್ಲಿ ಅಪರಾಧ ಕೃತ್ಯವೆಸಗಿದ ಬಾಲಕನನ್ನು ತನಿಖಾ ತಂಡ ಕೇವಲ 24 ಗಂಟೆಯಲ್ಲೇ ವಶಕ್ಕೆ ಪಡೆದು, ವಿಚಾರಣೆ ನಡೆಸಿ ಬಾಲ ನ್ಯಾಯ ಮಂಡಳಿಗೆ ಮುಂದೆ ಹಾಜರು ಪಡಿಸಲಾಗಿತ್ತು. ತನಿಖಾ ತಂಡ ಕಾರ್ಯವನ್ನು ಮೆಚ್ಚಿ ಡಿಜಿ ಮತ್ತು ಐಜಿಪಿಯವರ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದರು.

ಬಹುಮಾನದ ಶೇ. 50ರಷ್ಟು ಮೊತ್ತ ಬಾಲಕಿ ಕುಟುಂಬಕ್ಕೆ

ತನಿಖಾ ತಂಡಕ್ಕೆ ಡಿಜಿ ಮತ್ತು ಐಜಿಪಿಯವರ ಘೋಷಿಸಿದ ಒಂದು ಲಕ್ಷ ರೂಪಾಯಿ ನಗದು ಬಹುಮಾನದ ಶೇ. 50ರಷ್ಟು ಮೊತ್ತವನ್ನು ಸಂತ್ರಸ್ತ ಬಾಲಕಿ ಕುಟುಂಬಕ್ಕೆ ನೀಡಲು ತನಿಖಾ ತಂಡ ನಿರ್ಧರಿಸಿದೆ. ತನಿಖಾ ತಂಡ ಕಾರ್ಯವನ್ನು ಎಸ್ಪಿ ಇಶಾ ಪಂತ್ ಅವರು ಪ್ರಶಂಶಿಸಿ, ಶ್ಲಾಘಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!