ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾನ್ ಮಸಾಲ ತಂಬಾಕು ಜಾಹಿರಾತಿನಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟರಾದ ಶಾರೂಖ್ ಖಾನ್ ಹಾಗೂ ಅಜಯ್ ದೇವಗನ್ ಅವರಿಗೆ ವಿದ್ಯಾರ್ಥಿನಿಯೊಬ್ಬಳು ಛೀ ಮಾರಿ ಹಾಕಿದ್ದಾಳೆ.
ಮಧ್ಯಪ್ರದೇಶದ ಖರಗೋನ್ ಜಿಲ್ಲೆಯಬಿಎ ವ್ಯಾಸಂಗ ಮಾಡುತ್ತಿದ್ದವಿದ್ಯಾರ್ಥಿನಿ ಸ್ಟಾರ್ ನಟರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.
ಶಾರೂಖ್, ದೇವಗನ್ ಆಕ್ಷೇಪದ ನಡುವೆಯೂ ತಂಬಾಕು ಜಾಹಿರಾತಿನಲ್ಲಿ ಕಾಣಿಸಿಕೊಂಡು ಯುವ ಜನತೆ ಮೇಲೆ ಪರಿಣಾಮ ಬೀರುವಂತೆ ಮಾಡಿದ್ದಾರೆ ಎಂದು ಈ ಬಾಲಕಿ ಆರೋಪಿಸಿದ್ದಾಳೆ. ಇದಕ್ಕಾಗಿ ಕೋಪಗೊಂಡು ಈ ಇಬ್ಬರು ನಟರ ಮನೆ ವಿಳಾಸಕ್ಕೆ 5 ರೂ. ಮನಿಆರ್ಡರ್ ಮಾಡಿದ್ದಾಳೆ.
ಶಾರೂಖ್ ಖಾನ್ ಮತ್ತು ಅಜಯ್ ದೇವಗನ್ ಅವರನ್ನು ನಾನು ಸಹೋದರನಂತೆ ಭಾವಿಸುತ್ತೇನೆ. ಹಾಗಾಗಿ ಇಬ್ಬರು ನನ್ನ ಮನವಿಯನ್ನು ಪುರಸ್ಕರಿಸಲೇಬೇಕು. ದಯವಿಟ್ಟು ಪಾನ್ ಮಸಾಲಾ ಜಾಹಿರಾತನ್ನು ಹಿಂಪಡೆದು ಯುವಜನತೆಯನ್ನು ರಕ್ಷಿಸಬೇಕೆಂದು ಕೇಳಿಕೊಂಡಿದ್ದಾಳೆ.
ಇತ್ತೀಚೆಗೆ ಪಾನ್ ಮಸಾಲ ತಂಬಾಕು ಜಾಹಿರಾತಿನಲ್ಲಿ ಕಾಣಿಸಿಕೊಂಡು ಭಾರೀ ಸುದ್ದಿಯಾಗಿದ್ದ ಬೆನ್ನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಜಾಹಿರಾತಿನಿಂದ ಹಿಂದೆ ಸರಿದಿದ್ದರು.