ಹೊಸದಿಗಂತ ಡಿಜಿಟಲ್ ಡೆಸ್ಕ್:
ಅದ್ಭುತ ಬೌಲಿಂಗ್ ದಾಳಿ ನಡುವೆಯೂ ಆರ್ಸಿಬಿ ತಂಡಕ್ಕೆ ಶಾರ್ದೂಲ್ ಠಾಕೂರ್ ಠಕ್ಕರ್ ನೀಡಿದ್ದು, ಇದರ ಪರಿಣಾಮ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 204 ರನ್ ಸಿಡಿಸಿತು.
ಟಾಸ್ ಸೋತು ಬ್ಯಾಟಿಂಗ್ ಇಳಿದ ಕೋಲ್ಕತಾ ತಂಡಕ್ಕೆ ರಹಮಾನುಲ್ಹಾ ಗುರ್ಬಾಜ್ ಉತ್ತಮ ಆರಂಭ ನೀಡಿದರೆ, ಮತ್ತೊಂದೆಡೆ ವಿಕೆಟ್ ಪತನ ಆರಂಭಗೊಂಡಿತು. ವೆಂಕಟೇಶ್ ಅಯ್ಯರ್ ಕೇವಲ 3 ರನ್ ಸಿಡಿಸಿ ಔಟಾದರು. ಇತ್ತ ಮನ್ದೀಪ್ ಸಿಂಗ್ ಡಕೌಟ್ ಆದರು.ನಾಯಕ ನಿತೀಶ್ ರಾಣಾ ಕೇವಲ 1 ರನ್ ಸಿಡಿಸಿ ಔಟಾದರು.ರಿಂಕು ಸಿಂಗ್ ಜೊತೆ ಸೇರಿದ ಗುರ್ಬಾಜ್ ಬ್ಯಾಟಿಂಗ್ ಮುಂದುವರಿಸಿದರು. ಗು
ಗುರ್ಬಾಜ್ 44 ರನ್ಗೆ 57 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಆ್ಯಂಡ್ರೆ ರೆಸೆಲ್ ವಿಕೆಟ್ ಪತನಗೊಂಡಿತು. ರಸೆಲ್ ವಿಕೆಟ್ ಪತನ ಕೆಕೆಆರ್ ತಂಡಕ್ಕೆ ತೀವ್ರ ಆಘಾತ ನೀಡಿತು. ರಿಂಕು ಸಿಂಗ್ ಹಾಗೂ ಶಾರ್ದೂಲ್ ಠಾಕೂರ್ ಜೊತೆಯಾಟ ಕೆಕೆಆರ್ ತಂಡಕ್ಕೆ ಬಲ ನೀಡಿತು . ಬೌಂಡರಿ ಹಾಗೂ ಸಿಕ್ಸರ್ ಮೂಲಕ ಅಬ್ಬರಿಸಿದ ಠಾಕೂರ್ ಹಾಫ್ ಸೆಂಚುರಿ ಸಿಡಿಸಿದರು.
ರಿಂಕು ಸಿಂಗ್ 33 ಎಸೆತದಲ್ಲಿ 46 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಶಾರ್ದೂಲ್ ಠಾಕೂರ್ ಅಬ್ಬರ ಮುಂದುವರಿಯಿತು. ಠಾಕೂರ್ 29 ಎಸೆತದಲ್ಲಿ ಅಜೇಯ 68 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 204 ರನ್ ಸಿಡಿಸಿತು.