ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೀವನದಲ್ಲಿ ಉದ್ಧಾರ ಆಗುವ ಮಾತುಗಳನ್ನು ಯಾರೇ ಹೇಳಿದರೂ ಕೊನೆಗೇ ಅವರನ್ನೇ ಶತ್ರುಗಳಂತೆ ನೋಡುತ್ತಾರೆ. ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಕ್ಷಣಾರ್ಧದಲ್ಲಿ ಜೀವ ತೆಗೆಯುತ್ತಿದ್ದಾರೆ ಇಂತಹದೊಂದು ಆಘಾತಕಾರಿ ಘಟನೆ ಪಂಜಾಬ್ನ ಅಮೃತ್ ಸರ್ನಲ್ಲಿ ನಡೆದಿದೆ. ಅಳಿಯನಿಗಿದ್ದ ಡ್ರಗ್ಸ್ ವ್ಯಸನವನ್ನು ಬಿಡಿಸಲು ಹೋಗಿ ಸೋದರಮಾವ ಹೆಣವಾಗಿದ್ದಾರೆ.
ಗಗ್ಗರಬಾನ ಗ್ರಾಮದ ಯುವಕ ಗುರ್ಬಿಂದರ್ ಸಿಂಗ್ ಅಲಿಯಾಸ್ ಗೋಪಿ ಮಾದಕ ವ್ಯಸನಿಯಾಗಿದ್ದ. ಆತನಿಗೆ ಮಾದಕ ವಸ್ತುಗಳಿಂದ ಮುಕ್ತಿ ದೊರಕಿಸಲು ಕುಟುಂಬಸ್ಥರು ಹಲವು ಪ್ರಯತ್ನಗಳನ್ನು ಮಾಡಿದರು. ಅದರಲ್ಲೂ ಸೋದರ ಮಾವಪ್ರತಿ ಬಾರಿ ಬುದ್ದಿ ಮಾತು ಹೇಳಿದ್ದೇ ಈ ಘಟನೆಗೆ ಕಾರಣವಾಗಿದೆ. ಗುರ್ಬಿಂದರ್ ಸಿಂಗ್ ಬೆಳಗ್ಗೆ 8 ಗಂಟೆಗೆ ಮಾವ ನರಿಂದರ್ ಸಿಂಗ್ ಮನೆಗೆ ಬಂದಿದ್ದಾನೆ. ಮನೆಯ ಗೇಟ್ ತೆರೆದ ನರೀಂದರ್ ಸಿಂಗ್ ತನ್ನ ಸೋದರಳಿಯನನ್ನು ಒಳಗೆ ಬರುವಂತೆ ಹೇಳಿ ಹಿಂತಿರುಗಿ ಮನೆಯೊಳಗೆ ಹೋದನು. ಇದೇ ವೇಳೆ ಹಿಂಬದಿಯಿಂದ ಬಂದ ಗುರ್ಬಿಂದರ್ ಸಿಂಗ್ ಏಕಾಏಕಿ ಚಾಕುವಿನಿಂದ ಚಿಕ್ಕಪ್ಪನ ಮೇಲೆ ಹಲ್ಲೆ ನಡೆಸಿದ್ದಾನೆ.
ದಾಳಿ ಮಾಡುವಾಗ ನರಿಂದರ್ ಸಿಂಗ್ ಅಳಿಯನನ್ನು ತಡೆಯಲು ಪ್ರಯತ್ನಿಸಿದನು. ಅಷ್ಟರಲ್ಲಿ ಕಿರುಚಾಟ ಕೇಳಿದ ನರೀಂದರ್ ಸಿಂಗ್ ಕುಟುಂಬಸ್ಥರು ಓಡಿ ಬಂದರು. ಚಾಕು ದಾಳಿಯಲ್ಲಿ ನರೀಂದರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರು. ತೀವ್ರ ರಕ್ತಸಾವ್ರವಾಗಿದ್ದ ನರಿಂದರ್ ಸಿಂಗ್ ಸಾವನ್ನಪ್ಪಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಲೆ ಮಾಡಿದ ಗುರ್ಬಿಂದರ್ ಸಿಂಗ್ ತಲೆಮರೆಸಿಕೊಂಡಿದ್ದಾನೆ. ಆತನನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.