ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಹೊರವಲಯದಲ್ಲಿ ದುಷ್ಕರ್ಮಿಗಳು ವ್ಯಕ್ತಿಗೆ ಚಾಕು ಇರಿದು ಪರಾರಿಯಾಗಿದ್ದಾರೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಉಳ್ಳಾಲದ ಕೋಟೆಪುರ ನಿವಾಸಿ ಸದಕತ್ತುಲ್ಲಾ ಎಂಬುವವರ ಮೇಲೆ ತಡರಾತ್ರಿ ಅಟ್ಯಾಕ್ ಮಾಡಲಾಗಿದೆ. ಸದಕತ್ತುಲ್ಲಾ ಮನೆಗೆ ದುಷ್ಕರ್ಮಿಗಳು ತೆರಳಿದ್ದು, ಅವರನ್ನು ಹೊರಗೆ ಕರೆಸಿದ್ದಾರೆ. ನಂತರ ಕೊಲೆಗೆ ಯತ್ನ ಮಾಡಿ ಪರಾರಿಯಾಗಿದ್ದಾರೆ.
ಛಬ್ಬಿ ಅಲಿಯಾಸ್ ಕಬೀರ್ ಹಾಗೂ ಝಾರಿಕ್ ಎನ್ನುವವರಿಂದ ಕೃತ್ಯ ನಡೆದಿರುವ ಶಂಕೆ ಇದೆ. ಹಲ್ಲೆಗೊಳಗಾದ ಸದಕತ್ತುಲ್ಲಾ ಫಿಶ್ ಆಯಿಲ್ ಮಿಲ್ ಮಾಲೀಕರನ್ನು ಹೆದರಿಸಿ ಹಣ ಪಡೆದಿದ್ದರು ಎನ್ನಲಾಗಿದೆ. ಈ ವಿಷಯವಾಗಿ ಘರ್ಷಣೆಯಾಗಿದ್ದು, ಚಾಕು ಇರಿದಿರುವ ಸಾಧ್ಯತೆ ಇದೆ.