SHOCKING NEWS | ಒಂದೇ ಕುಟುಂಬದ ನಾಲ್ವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಾಲೂಕಿನ ಹಾಡುವಳ್ಳಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ಕು ಜನರನ್ನು ಮಚ್ಚಿನಿಂದ ಕೊಚ್ಚಿ ಅಮಾನುಷವಾಗಿ ಕೊಲೆ ಮಾಡಿದ ಘಟನೆ ಶುಕ್ರವಾರ ನಡೆದಿದ್ದು ಅಂಗನವಾಡಿಗೆ ತೆರಳಿದ್ದ ಬಾಲಕಿ ಪಾರಾಗಿದ್ದಾಳೆ .

ಹಾಡುವಳ್ಳಿ ನಿವಾಸಿಗಶಳಾದ ಶಂಭು ಭಟ್ಟ (65) ಅವರ ಪತ್ನಿ ಮಾದೇವಿ ಭಟ್ಟ ಮಗ ರಾಜೀವ ಭಟ್ಟ(34) ಮತ್ತು ಸೊಸೆ ಕುಸುಮಾ ಭಟ್ಟ(30) ಅವರನ್ನು ಭರ್ಬರವಾಗಿ ಕೊಲೆ ಮಾಡಿ ಎಸೆಯಲಾಗಿದೆ.

ಮೃತ ದೇಹಗಳು ರಕ್ತದ ಮಡುವಿನಲ್ಲಿ ಬಿದ್ದುಕೊಂಡಿವೆ.
ಭಟ್ಕಳ ಡಿ.ವೈ.ಎಸ್. ಪಿ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!