ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರದ ಹಾರೋಹಳ್ಳಿ (Harohalli) ಪಟ್ಟಣದ ಕೆಎಸ್ಆರ್ಟಿಸಿ ಬಸ್ ಡಿಪೋ ಬಳಿ ಹಾಡಹಗಲೇ ರೌಡಿಶೀಟರ್ವೊಬ್ಬನನ್ನು ಲಾಂಗು, ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.
ಬೆಂಗಳೂರಿನ ಕೋಣನಕುಂಟೆ ನಿವಾಸಿ ರೌಡಿಶೀಟರ್ ಸಂತೋಷ್ (33) ಅಲಿಯಾಸ್ ಕರಡಿ ಹತ್ಯೆಯಾದ ವ್ಯಕ್ತಿ.
ಬೆಂಗಳೂರಿನ ಹಲವು ಠಾಣೆಗಳಲ್ಲಿ ಮೃತ ವ್ಯಕ್ತಿ ಮೇಲೆ ಕ್ರಿಮಿನಲ್ ಕೇಸ್ ಗಳಿದ್ದು, ಹಳೇ ವೈಷಮ್ಯಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕಾರಿನಿಂದ ಬೈಕ್ಗೆ ಗುದ್ದಿ ಆತ ಕೆಳಗೆ ಬಿದ್ದ ಬಳಿಕ ಲಾಂಗು ಮಚ್ಚು ಹಿಡಿದು ಅಟ್ಟಾಡಿಸಿರೋ ನಾಲ್ವರು ದುಷ್ಕರ್ಮಿಗಳು ಬರ್ಬರವಾಗಗಿ ಹತ್ಯೆ ಮಾಡಿದ್ದಾರೆ.