SHOCKING | ವಿಜಯಪುರದಲ್ಲಿ ಆಘಾತಕಾರಿ ಘಟನೆ: ಉರಿ ಬಿಸಿಲಿಗೆ ಬಾಲಕ ಬಲಿ
ಹೊಸದಿಗಂತ ವರದಿ, ವಿಜಯಪುರ: ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಬಿಸಿಲ ಬೇಗೆಗೆ ಓರ್ವ ಬಾಲಕ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಇಲ್ಲಿನ ಶ್ರೀಶೈಲ ಬಿರಾದಾರ ( 15 ) ಮೃತ ಪಟ್ಟ ಬಾಲಕ. ಶ್ರೀಶೈಲ ಬಿರಾದಾರ ಬೇಸಿಗೆ ರಜೆ ಹಿನ್ನೆಲೆ ಬಿಸಿಲಿನಲ್ಲಿ ಆಟ ಆಡಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ. 8 ನೇ ತರಗತಿ ಪಾಸಾಗಿದ್ದ ಶ್ರೀಶೈಲ, ತಾಲೂಕು ಮಟ್ಟದ ಕಬಡ್ಡಿ, ಖೋಖೋ ಚಾಂಪಿಯನ್ ಆಗಿದ್ದನು. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Copy and paste this URL into your WordPress site to embed
Copy and paste this code into your site to embed