ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ (80) ಮತ್ತು ರಿಷಬ್ ಪಂತ್ (56) ರ ಹೋರಾಟದಿಂದ 265 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತಕ್ಕೆ ಆರಂಭಿಕಾರದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ರ ವಿಕೆಟ್ ಕಳೆದುಕೊಂಡು ನಿರಾಸೆ ಮೂಡಿಸಿದರು.
ಈ ವೇಳೆ ಕ್ರೀಸ್ಗಿಳಿದ ಶ್ರೇಯರ್ ಅಯ್ಯರ್ ಮತ್ತು ರಿಷಬ್ ಪಂತ್ ಜವಾಬ್ದಾರಿಯುತ 110 ರನ್ಗಳ ಜೊತೆಯಾಟವಾಡಿ ತಂಡ ಉತ್ತಮ ರನ್ ಕಲೆಹಾಕುವಲ್ಲಿ ನೆರವಾದರು.
ಈ ವೇಳೆ ರಿಷಬ್ ಪಂತ್(56)ಗೆ ಜಾಸನ್ ಹೋಲ್ಡರ್ ಪೆವಿಲಿಯನ್ ದಾರಿ ತೋರಿಸಿದರು. ಸೂರ್ಯಕುಮಾರ್ ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ವಾಪಸ್ಸಾದರು.
ಸೂರ್ಯಕುಮಾರ್ ಔಟಾದ ಬಳಿಕ ಮೈದಾನಕ್ಕಿಳಿದ ವಾಷಿಂಗ್ಟನ್ ಸುಂದರ್(33) ಶ್ರೇಯಸ್ ಅಯ್ಯರ್ಗೆ ಉತ್ತಮ ಸಾಥ್ ನೀಡಿದರು. 80 ರನ್ ಗಳಿಸಿದ್ದಾಗ ಶ್ರೇಯಸ್ ಅಯ್ಯರ್ ಅರೆಕಾಲಿಕ ಬೌಲರ್ ಡ್ಯಾರನ್ ಬ್ರಾವೋ ಎಸೆತದಲ್ಲಿ ಔಟಾಗಿ ಶತಕದಿಂದ ವಂಚಿತರಾದರು. ಬಳಿಕ ಬಂದ ಬೌಲರ್ ದೀಪಕ್ ಚಹರ್ 38 ಎಸೆತಗಳಲ್ಲಿ 4 ಬೌಂಡರಿ, 2 ಭರ್ಜರಿ ಸಿಕ್ಸರ್ಗಳನ್ನು ಸಿಡಿಸಿ 38 ರನ್ಗಳಿದರು. ದೀಪಕ್ ಚಹರ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ಶಾಯ್ ಹೋಪ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಭಾರತ ತಂಡ ದಿಢೀರ್ ಕುಸಿತಗೊಂಡು ತನ್ನೆಲ್ಲಾ ವಿಕೆಟ್ ಒಪ್ಪಿಸಿ ವೆಸ್ಟ್ ಇಂಡೀಸ್ಗೆ 266 ರನ್ಗಳ ಗುರಿ ನೀಡಿದೆ.
ವೆಸ್ಟ್ ಇಂಡೀಸ್ ಪರವಾಗಿ ಜಾಸನ್ ಹೋಲ್ಡರ್ 34/4 ವಿಕೆಟ್ ಪಡೆದರೆ, ಅಲ್ಜಾರ್ರಿ ಜೋಶೆಫ್ 2, ಹೈಡೆನ್ ವಾಲ್ಶ್ 2 ವಿಕೆಟ್ ಕಿತ್ತರು.