ಕನ್ಹಯ್ಯಲಾಲ ಹತ್ಯೆ ಘಟನೆ ಖಂಡನೀಯ: ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ

ಹೊಸದಿಗಂತ ವರದಿ ವಿಜಯಪುರ:

ಉದಯಪುರದ ಕನ್ಹಯ್ಯಲಾಲ ಹತ್ಯೆ ಘಟನೆ ಖಂಡನೀಯ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು‌.

ನಗರದಲ್ಲಿ ಶನಿವಾರ ಮಾತನಾಡಿದ ಅವರು ಅಭಿಪ್ರಾಯ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಅಭಿಪ್ರಾಯದ ಮೂಲಕವೇ ವಿರೋಧಿಸಬೇಕು. ಹತ್ಯೆ ಮೂಲಕ ಅಲ್ಲ. ಇಂಥ ಘಟನೆ ಮಾಡಿದವರು, ಪ್ರಚೋದನೆ ಮಾಡಿದವರಿಗೆ ಕಠಿಣ
ಶಿಕ್ಷೆ ಆಗಬೇಕು. ಮುಂದಿನ ದಿನಗಳಲ್ಲಿ ಇಂಥ ಘಟನೆ ಮರುಕಳಿಸಬಾರದು ಎಂದರು.

ಅಲ್ಲದೇ, ಸರ್ಕಾರದ ಸೌಲಭ್ಯ ಎಲ್ಲ ಸಮುದಾಯದವರಿಗೆ ಸಿಗಬೇಕು. ಯಾವ ಸಮುದಾಯದ ಬೇಡಿಕೆ ನ್ಯಾಯೋಚಿತವಾಗಿದೆಯೋ ಆ ಎಲ್ಲ ಸಮುದಾಯಗಳ ಬೇಡಿಕೆಯನ್ನು ಸರ್ಕಾರ ನೀಡಬೇಕು ಎಂದರು.

ಸರ್ಕಾರದ ಸೌಲಭ್ಯಗಳು ಎಲ್ಲರಿಗೂ ಸಮಾನವಾಗಿ ಸಿಗಬೇಕು‌‌. ಆಕಾರಣಕ್ಕೆ ಯಾರೆಲ್ಲ ಸೌಲಭ್ಯ ವಂಚಿತರಾಗಿದ್ದಾರೋ ಅವರಿಗೆಲ್ಲ ಮೀಸಲಾತಿ ಅವಕಾಶ ಕಲ್ಪಿಸಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!