ಮಠಾಧೀಶರ ಅಸ್ಮಿತೆ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ: ಶರಣಬಸವೇಶ್ವರ ಶ್ರೀ

ಹೊಸದಿಗಂತ ವರದಿ, ಕಲಬುರಗಿ:

ನಾಡಿನ ಮಠಾಧೀಶರ ಅಸ್ಮಿತೆ ಹಾಗೂ ಅವರ ವೈಷ ಭೂಷಣ ಬಗ್ಗೆ ಮಾತನಾಡುವ ನೈತಿಕತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಗೆ ಇಲ್ಲವೆಂದು ಈಡಿಗ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹಾವೇರಿ ಜಿಲ್ಲೆಯ ಶರಣಬಸವೇಶ್ವರ ಮಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು ಕಿಡಿಕಾರಿದ್ದಾರೆ.

ಅವರು ಶನಿವಾರ ನಗರದ ಆಮಂತ್ರಣ ಹೋಟೆಲ್, ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ,ಸಿದ್ದರಾಮಯ್ಯ ರಾಜಕೀಯದಲ್ಲಿರಲು ಲಾಯಕ್ಕಿಲ್ಲ.ಕೂಡಲೇ ಅವರು ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದರು.

ಒಂದು ಕಡೆ ದೇವರ ಸನ್ನೀಧಿಯಲ್ಲಿ ನೃತ್ಯ ಮಾಡಿ,ನಾಟಕ ಮಾಡುತ್ತಾರೆ.ಇನ್ನೊಂದೆಡೆ ಮಠಾಧೀಶರ ಅಸ್ಮಿತೆ ಬಗ್ಗೆ ಮಾತನಾಡುತ್ತಾರೆ.ನಿಮಗೆ ಧೈರ್ಯ ಇದ್ದರೆ ಮುಲ್ಲಾ ಮತ್ತು ಪಾದ್ರಿಗಳ ಬಗ್ಗೆ ಮಾತನಾಡಿ ನೋಡೋಣ ಎಂದು ಸವಾಲೆಸೆದರು.

ಮಾಜಿ ಮುಖ್ಯಮಂತ್ರಿ ಒಬ್ಬ ಹುಚ್ಚನ ತರಹದಲ್ಲಿ ವತ೯ನೆ ಮಾಡುತ್ತಿದ್ದಾರೆ. ಅವರನ್ನು ಕೂಡಲೇ ಬೆಂಗಳೂರಿನ ನಿಮಾನ್ಸ್,ಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ಕೊಡಿಸಬೇಕಾದ ಅನಿವಾರ್ಯತೆ ಇದೆ.

ಸಿದ್ದರಾಮಯ್ಯ, ಗೆ ಬಹಿಷ್ಕಾರ
ಮುಂಬರುವ ದಿನಗಳಲ್ಲಿ ನಾವು ಸಿದ್ದರಾಮಯ್ಯ ಅವರನ್ನು ಪ್ರತಿಯೊಂದು ಹಂತದಲ್ಲೂ ಬಹಿಷ್ಕಾರ ಮಾಡುತ್ತೇವೆ. ಸಿದ್ದರಾಮಯ್ಯ ಭಾಗವಹಿಸುವ ಯಾವುದೇ ವೇದಿಕೆಯಲ್ಲಿ ಮಠಾಧೀಶರು ಭಾಗವಹಿಸುವುದಿಲ್ಲ ಎಂದು ನಿಣ೯ಯ ಮಾಡಿದರು.

ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ದುಯೋ೯ದನವಾಗಿದ್ದು, ಅವರಿಂದಲೇ ಪಕ್ಷ ಸಂಪೂರ್ಣ ಸವ೯ನಾಶವಾಗಲಿದೆ. ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಕ್ಷೇತ್ರದಲ್ಲಿ ಮಠಾಧೀಶರು ಹೋಗಿ ಅವರನ್ನು ಸೋಲಿಸುತ್ತೇವೆ ಎಂದು ಪಣ ತೊಟ್ಟರು.

ಸಿದ್ದರಾಮಯ್ಯ ನವರ ಹೇಳಿಕೆಗಳ ವಿಚಾರವಾಗಿ ಇದೇ ಏಪ್ರಿಲ್ 3ರಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ತೀಮಾ೯ನಿಸಲಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!