ಹೊಸದಿಗಂತ ವರದಿ, ವಿಜಯನಗರ:
ಅರಳು ಮರಳು ಹಿಡಿದಿದ್ದು, ನಮ್ಮ ರಾಜಾಹುಲಿ, ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗಲ್ಲ, ಅದು ಸಿದ್ದರಾಮಯ್ಯ ಗೆ ಹಿಡಿದಿದೆ. ಅದಕ್ಕಾಗಿಯೇ ಮನಬಂದಂತೆ ಮಾತಾಡ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಾಗ್ದಾಳಿ ನಡೆಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ನಮ್ಮ ರಾಜಾಹುಲಿ ಘರ್ಜನೆಗೆ ಕೈ ನಾಯಕರು ಕಂಗಾಲಾಗಿದ್ದಾರೆ, ಮೋದಿ ಜೀ ಅವರ ಕಾಲ ಕೆಳಗೆ ಕೂರಲೂ ಸಿದ್ಧರಾಮಯ್ಯಗೆ ಯೋಗ್ಯತೆ ಇಲ್ಲ. ನಮ್ಮ ಪಕ್ಷದ ಯಾವುದೇ ನಾಯಕರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ರಾಜಾಹುಲಿ ಬಿ.ಎಸ್.ಯಡಿಯೂರಪ್ಪ ಅವರು ಯಾರಿಗೂ ಬಗ್ಗುವವರಲ್ಲ. ಸಿದ್ದರಾಮಯ್ಯ ಅವರಿಗೆ ಅರಳು ಮರಳು ಹಿಡಿದಿದೆ ಎಂದು ಟೀಕಿಸಿದರು.
ಬಿ.ಎಸ್.ವೈ.ಅವರನ್ನು ಕೆಳಗಿಳಿಸಲು ಸಿದ್ದರಾಮಯ್ಯ ಸೇರಿ ಕೈ ನಾಯಕರು ಹರಸಹಾಸ ಪಟ್ಟರು. ಸುಳ್ಳು ಕೇಸ್ ಹಾಕಿಸಿದ್ರು. ಆದರೂ ಜನರ ಬೆಂಬಲದಿಂದ ಮತ್ತೊಮ್ಮೆ ಬಿಎಸ್ವೈ ಮುಖ್ಯಮಂತ್ರಿ ಆದ್ರು. ಅವರು ರಾಜ್ಯದ ಜನರ ಹೃದಯ ಸಿಂಹಾಸನದಲ್ಲಿದ್ದಾರೆ, ಇದನ್ನು ಕಂಡು ಕೈ ನಾಯಕರು ನೀಚ ಕೆಲಸಕ್ಕೆ ಕೈಹಾಕಬೇಡಿ. ಭಾರತ ಅಷ್ಟೇ ಅಲ್ಲ ಇಡೀ ವಿಶ್ವದ ಜನರು ಮೋದಿಜೀ ಅವರ ಕಾರ್ಯವೈಖರಿಯನ್ನು ಮೆಚ್ಚಿದ್ದಾರೆ. ಮೋದಿಜೀ ಅವರೊಬ್ಬ ವಿಶ್ವದ ಅಗ್ರಗಣ್ಯ ನಾಯಕರಾಗಿದ್ದಾರೆ. ಅವರ ಬಗ್ಗೆ ಏನೂ ತಿಳಿಯದೇ ಹಗುರವಾಗಿ ಮಾತನಾಡಬೇಡಿ ಎಂದು ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ