ಹೊಸ ದಿಗಂತ ವರದಿ, ಹುಬ್ಬಳ್ಳಿ:
ಸರಳ ವಾಸ್ತು ಗೂರೂಜಿ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳಿಬ್ಬರ ವಿರುದ್ಧ ಸುಮಾರು 800ಕ್ಕೂ ಪುಟದ ದೋಷಾರೋಪಪಟ್ಟಿಯನ್ನು ತನಿಖಾಧಿಕಾರಿಗಳು ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ವಿರುದ್ಧ ಎಸಿಎಪಿ ವಿನೋದ ಮುಕ್ತೆದಾರ ಚಾರ್ಜಶಿಟ್ ಸಲ್ಲಿಸಿದ್ದಾರೆ.
ಇಲ್ಲಿಯ ಉಣಕಲ್ ಕೆರೆಯ ಹತ್ತಿರದ ಹೋಟೆಲೊಂದರಲ್ಲಿ ಜು.5 ರಂದು ಇಬ್ಬರು ಹಂತಕರು ಚಂದ್ರಶೇಖರ ಗುರೂಜಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದರು.
ಈ ಹತ್ಯೆಯು ಇಡೀ ವಾಣಿಜ್ಯನಗರವನ್ನು ನಲುಗಿಸಿತ್ತು. ಪ್ರಕರಣದ ತನಿಖೆಗಾಗಿ ಪೊಲೀಸ್ ಕಮಿಷನರ್ ಲಾಭೂರಾಮ್ ಅವರು, ಎಸಿಪಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ಈ ತಂಡ ಘಟನೆ ನಡೆದ 4 ತಾಸಿನೊಳಗೆ ಪೊಲೀಸರು ಹಂತಕರಿ ಬ್ಬರನ್ನು ರಾಮದುರ್ಗ ಬಳಿ ಸಿನಿಮಯ ರೀತಿಯಲ್ಲಿ ಅಡ್ಡಗಟ್ಟಿ ವಶಕ್ಕೆ ಪಡೆದಿದ್ದರು.