ಸಿಹಿಗೆಣಸು ಮೂಟೆಗಳಡಿಯಲ್ಲಿ ಬೀಟೆ ನಾಟಾ ಸಾಗಾಟ: ಓರ್ವನ ಬಂಧನ

ಹೊಸದಿಗಂತ ವರದಿ,ಮಡಿಕೇರಿ:

ಪಿಕ್‍ಅಪ್ ವಾಹನದಲ್ಲಿ ಸಿಹಿಗೆಣಸು ಮೂಟೆಗಳ ಜೊತೆಗೆ ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ವೀರಾಜಪೇಟೆ ವಲಯ ಅರಣ್ಯ ಇಲಾಖೆ ಪತ್ತೆ ಹಚ್ಚಿದೆ.
ಕೃತ್ಯಕ್ಕೆ ಬಳಸಿದ್ದ ಪಿಕ್‍ಅಪ್ ವಾಹನ ಸಹಿತ ಚಾಲಕನನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಒಟ್ಟು 5 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವೀರಾಜಪೇಟೆ ತಾಲೂಕಿನ ಬೇತು ಗ್ರಾಮದ ನಿವಾಸಿ ಹ್ಯಾರಿಸ್ ಎಂ.ಎ. ಬಂಧಿತ ಆರೋಪಿಯಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಶಾಮೀಲಾಗಿರುವ ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ: ವೀರಾಜಪೇಟೆ ವಲಯ ಹೆಗ್ಗಳ ಶಾಖೆಯ ಕೊಟ್ಟೋಳಿ-ವೀರಾಜಪೇಟೆ ಮುಖ್ಯರಸ್ತೆ ಮಾರ್ಗವಾಗಿ ಪಿಕ್‍ಅಪ್ ವಾಹನದ (ಕೆ.ಎಲ್.45-ಎ.1656) ಮೇಲ್ಭಾಗದಲ್ಲಿ ಸಿಹಿ ಗೆಣಸು ಮೂಟೆಗಳನ್ನು ಇಟ್ಟು 11 ಬೀಟೆ ಮರದ ನಾಟಾಗಳನ್ನು ಸಾಗಿಸಲಾಗುತ್ತಿತ್ತು. ವಾಹನವನ್ನು ಪರಿಶೀಲನೆ ನಡೆಸಿದ ಸಂದರ್ಭ ಅಕ್ರಮ ಮರ ಸಾಗಾಟ ಪ್ರಕರಣ ಪತ್ತೆಯಾಗಿದೆ. ಈ ವೇಳೆ ವಾಹನ ಚಾಲಕ ಬೇತು ಗ್ರಾಮದ ನಿವಾಸಿ ಹ್ಯಾರೀಸ್ ಎಂ.ಎ ಎಂಬ ಆರೋಪಿಯನ್ನು ಸ್ಥಳದಲ್ಲೇ ಬಂಧಿಸಲಾಗಿದೆ.
ಕೃತ್ಯದಲ್ಲಿ ಶಾಮೀಲಾಗಿರುವ ಕೊಟ್ಟಮುಡಿ ಹೊದವಾಡ ಗ್ರಾಮದ ಕೆ.ಯು. ಅಬ್ಬಾಸ್ ಮತ್ತು ನಾಪೋಕ್ಲು ಹಳೇ ತಾಲೂಕು ನಿವಾಸಿ ರಿಜ್ವಾನ್ ಎಂಬ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಶಕ್ಕೆ ಪಡೆಯಲಾದ ಒಟ್ಟು ಸ್ವತ್ತಿನ ಮೌಲ್ಯ 5 ಲಕ್ಷ ರೂ.ಗಳಾಗಿದ್ದು, ಆರೋಪಿ ವಿರುದ್ದ ಅರಣ್ಯ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಡಗು ವೃತ್ತದ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ, ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು, ವೈ. ಚಕ್ರಪಾಣ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೊಚ್ಚೇರ ನೆಹರು ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಕಳ್ಳೀರ ಎಂ.ದೇವಯ್ಯ, ಉಪ ವಲಯ ಅರಣ್ಯಾಧಿಕಾರಿ ದೇಯಂಡ ಸಂಜಿತ್ ಸೋಮಯ್ಯ, ಕೆ.ಆರ್ ಆನಂದ, ಕುಮಾರಿ ಎಂ.ಎಸ್ ಮೋನಿಷ, ಅರಣ್ಯ ರಕ್ಷಕರಾದ ಚಂದ್ರಶೇಖರ್ ಅಮರಗೋಳ, ಸಿ.ಅರುಣ, ಮಾಲತೇಶ ಬಡಿಗೇರ, ಅಶೋಕ, ಆರ್.ಆರ್.ಟಿ ಸಿಬ್ಬಂದಿಗಳಾದ ನಾಚಪ್ಪ, ಪವಿತ್ರ ಕುಮಾರ್, ಲಾರೆನ್ಸ್, ವಿಕಾಸ್, ಮಹೇಶ್ ಮತ್ತು ಲತೇಶ್ ಅವರುಗಳು ಕಾರ್ಯಾಚರಣೆ ನಡೆಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!