ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುವನಂತಪುರಂ ಮೂಲದ ಮಹಿಳೆಯೊಬ್ಬರು ಶಾಲಿಮಾರ್ ಹೋಟೆಲ್ಗೆ ಹೋಗಿ ಪರೋಟಾ ಪಾರ್ಸೆಲ್ ತೆಗೆದುಕೊಂಡಿದ್ದಾರೆ. ಅದರಲ್ಲಿ ಸತ್ತ ಹಾವಿನ ಚರ್ಮ ಕಾಣಿಸಿಕೊಂಡು ಆತಂಕಗೊಂಡಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸರ ಗಮನಕ್ಕೆ ತಂದು ಆಹಾರ ಸುರಕ್ಷತಾ ಅಧಿಕಾರಿಗಳನ್ನು ಕರೆತರಲು ಮನವಿ ಮಾಡಿದರು. ಮಹಿಳೆ ನೀಡಿದ ಮಾಹಿತಿ ಮೇರೆಗೆ ಆಹಾರ ಸುರಕ್ಷತಾ ಅಧಿಕಾರಿಗಳು ಸೇರಿದಂತೆ ಪೊಲೀಸರು ಶಾಲಿಮಾರ್ ಹೋಟೆಲ್ಗೆ ಆಗಮಿಸಿ ಮಹಿಳೆಯ ಪಾರ್ಸೆಲ್ನಲ್ಲಿ ಸತ್ತ ಹಾವಿನ ಚರ್ಮವನ್ನು ಪರಿಶೀಲಿಸಿದರು. ಬಳಿಕ ಹೊಟೇಲ್ನ ಅಡುಗೆ ಕೋಣೆಯನ್ನು ಪರಿಶೀಲಿಸಿದ ಅಧಿಕಾರಿಗಳು ಅಲ್ಲಿನ ಅನೈರ್ಮಲ್ಯ ವಾತಾವರಣ ಕಂಡು ಆಕ್ರೋಶ ವ್ಯಕ್ತಪಡಿಸಿದರು.
ಹೋಟೆಲ್ ಅಡುಗೆ ಮನೆಯಲ್ಲಿ ಎಲ್ಲಂದರಲ್ಲಿ ಕಸ ಬಿದ್ದಿದೆ. ಪಾತ್ರೆ ತೊಳೆಯದು ಗಬ್ಬು ನಾರುತ್ತಿದೆ ಅಡುಗೆಮನೆಯಲ್ಲಿ ಕನಿಷ್ಠ ಸಾಕಷ್ಟು ಬೆಳಕಿಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ಅಲ್ಲಿನ ಕೆಲ ಆಹಾರ ಪದಾರ್ಥಗಳನ್ನು ಪರೀಕ್ಷಿಸಿದ್ದಾರೆ. ಅವುಗಳಲ್ಲಿ ಯಾವುದೂ ಉತ್ತಮ ಗುಣಮಟ್ಟದ್ದಾಗಿಲ್ಲ ಎಂದು ಕಂಡುಬಂದ ಬಳಿಕ ಹೊಟೇಲ್ ಶಾಲಿಮಾರ್ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.