ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಹಲವು ಕಡೆ ಇಂದು ಸಂಜೆ ಸೂರ್ಯಗ್ರಹಣ ಗೋಚರಿಸಿದೆ.
ರಾಜ್ಯದ ಬೆಂಗಳೂರು, ಬೀದರ್, ಹುಬ್ಬಳ್ಳಿ, ಕೊಪ್ಪಳ , ಮಂಗಳೂರು, ಧಾರವಾಡ, ರಾಯಚೂರು, ಮೈಸೂರು, ಕಲಬುರಗಿ,ಬಳ್ಳಾರಿ, ವಿಜಯಪುರ, ಶಿವಮೊಗ್ಗ, ಬಾಗಲಕೋಟೆ, ಹಾಸನ, ಉಡುಪಿ, ಮಂಡ್ಯ ಸೇರಿ ರಾಜ್ಯದ ಹಲವು ನಗರಗಳಲ್ಲಿ ಸೂರ್ಯಗ್ರಹಣ ಗೋಚರವಾಗಿದೆ.
ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ.
ಇಂದು ಸಂಭವಿಸುವ ಸೂರ್ಯಗ್ರಹಣವು ಭಾಗಶಃ ಸೂರ್ಯಗ್ರಹಣವಾಗಿದೆ. ಇದು ಚಂದ್ರನ ನೆರಳಿನ ಕೇಂದ್ರವು ಭೂಮಿಯನ್ನು ತಪ್ಪಿಸಿಕೊಂಡಾಗ ಭೂಮಿಯ ಧ್ರುವ ಪ್ರದೇಶಗಳಲ್ಲಿ ಸಂಭವಿಸುತ್ತದೆ.