2 ವರ್ಷಗಳಿಂದ ಡಿಪ್ರೆಷನ್‌: ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಪಾಲಿಕೆ ಮಾಜಿ ಸದಸ್ಯನ ಪುತ್ರ

ದಿಗಂತ ವರದಿ ವಿಜಯಪುರ:

ಮಾನಸಿಕ ಖಿನ್ನತೆ ಹಿನ್ನೆಲೆ, ಪಾಲಿಕೆ ಮಾಜಿ ಸದಸ್ಯನ ಪುತ್ರನೊಬ್ಬ ತಲೆಗೆ ಪಿಸ್ತೂಲನಿಂದ ಗುಂಡು ಹಾರಿಸಿಕೊಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಶಿಕಾರಖಾನೆ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ.

ಅಶ್ನನ್ ಪ್ರಕಾಶ ಮಿರ್ಜಿ (21) ಮೃತಪಟ್ಟ ಯುವಕ. ಅಶ್ನನ್ ಮಿರ್ಜಿ ಈತ ಇತ್ತಿಚೇಗೆ ಬಿಸಿಎ ಪದವಿ ಮುಗಿಸಿ ಮನೆಯಲ್ಲಿದಿದ್ದು, ಕಳೆದ ಎರಡು ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಏಕಾಏಕಿ ಪಿಸ್ತೂಲ್ ನಿಂದ ತಲೆಗೆ ಗುಂಡು ಹಾರಿಸಿಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಶ್ನನ್ ನ ತಂದೆ, ಪಾಲಿಕೆ ಮಾಜಿ ಸದಸ್ಯ ಪ್ರಕಾಶ ಮಿರ್ಜಿ, ಇಲ್ಲಿನ ಮಹಾನಗರ ಪಾಲಿಕೆ 35 ಸದಸ್ಯರು ಆಸ್ತಿ ಘೋಷಣೆ ಮಾಡದ ಹಿನ್ನೆಲೆ, ಅವರ ವಿರುದ್ಧ ಕಲಬುರಗಿ ಹೈಕೋರ್ಟ್ ಗೆ ತೆರಳಿದ್ದ ವೇಳೆ, ಪಾಲಿಕೆ ಸದಸ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದ ಹಿನ್ನೆಲೆ, ಪಾಲಿಕೆ ಸದಸ್ಯರನ್ನು ಇತ್ತೀಚೆಗೆ ಸರ್ಕಾರ ಅನರ್ಹಗೊಳಿಸಿತ್ತು. ಇದರಿಂದ ಕೆಲವರು, ಪ್ರಕಾಶ ಮಿರ್ಜಿಗೆ ಜೀವ ಬೆದರಿಕೆ ಹಾಕಿದ್ದರು. ಹೀಗಾಗಿ ಪ್ರಕಾಶ ಮಿರ್ಜಿ ಪಿಸ್ತೂಲ್ ಲೋಡ್ ಮಾಡಿ ಇಟ್ಟಿರುತ್ತಿದ್ದರು ಎನ್ನಲಾಗಿದ್ದು, ಅದೇ ಪಿಸ್ತೂಲ್ ನಿಂದ ಪುತ್ರ ತಲೆಗೆ ಗುಂಡು ಹಾರಿಸಿಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಡಿವೈಎಸ್ ಪಿ ಬಸವರಾಜ ಯಲಿಗಾರ, ಸಿಪಿಐ ಮಲ್ಲಯ್ಯ ಮಠಪತಿ ಸೇರಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!