ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಸಾಮಾನ್ಯರ ಪಾಲಿಗೆ ಸೋನುಸೂದ್ ರಿಯಲ್ ಹೀರೋ ಆಗಿದ್ದಾರೆ. ಆದರೆ ಮೊನ್ನೆ ರೈಲಿನ ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸಿದ್ದಕ್ಕೆ ಉತ್ತರ ರೈಲ್ವೇ ಈ ರೀತಿಯ ಪ್ರಯಾಣ ಸೂಕ್ತವಲ್ಲ ಎಂದು ಎಚ್ಚರಿಕೆ ನೀಡಿತ್ತು. ಇದಕ್ಕೆ ಕ್ಷಮೆ ಕೇಳಿರುವ ಸೋನುಸೂದ್, ಪ್ರತಿದಿನ ಜನಸಾಮಾನ್ಯರ ಪ್ರಯಾಣ ಇದೇ ರೀತಿ ಇರುತ್ತದೆ ಎನ್ನುವ ಮೂಲಕ ಟಾಂಗ್ ನೀಡಿದ್ದಾರೆ.
ಆತ್ಮೀಯ ಸೋನುಸೂದ್, ನೀವು ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದ ಅನೇಕ ಜನರಿಗೆ ಮಾದರಿಯಾಗಿದ್ದೀರಿ. ರೈಲಿನಲ್ಲಿ ಪ್ರಯಾಣಿಸುವಾಗ ಹೀಗೆ ಮಾಡಿದರೆ ಅನೇಕರು ಇದನ್ನು ಅನುಸರಿಸುವ ಅಪಾಯವಿದೆ. ಆದ್ದರಿಂದ ದಯವಿಟ್ಟು ಇದನ್ನು ಮತ್ತೊಮ್ಮೆ ಮಾಡಬೇಡಿ. ಸುಗಮ ಮತ್ತು ಸುರಕ್ಷಿತ ಪ್ರಯಾಣವನ್ನು ಆನಂದಿಸಿ’ ಎಂದು ರೈಲ್ವೆ ಇಲಾಖೆ ಟ್ವೀಟ್ ಮಾಡಿದ್ದರು ಇದಕ್ಕೆ ಸೋನುಸೂದ್ ಪ್ರತಿಕ್ರಿಯಿಸಿ ಉತ್ತರ ರೈಲ್ವೆಗೆ ಕ್ಷಮೆಯಾಚಿಸುವ ಮೂಲಕ ಪ್ರತಿವಾದಿಸಿದರು.
ನಾನು ಕ್ಷಮೆ ಕೇಳುತ್ತೇನೆ. ಲಕ್ಷಾಂತರ ಬಡವರು ರೈಲಿನ ಬಾಗಿಲ ಬಳಿ ಕುಳಿತು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಅವರ ನೋವನ್ನು ಅರ್ಥಮಾಡಿಕೊಳ್ಳಲು ನಾನು ಫುಟ್ಬಾಲ್ ಬೋರ್ಡ್ ಬಳಿ ಕುಳಿತುಕೊಂಡೆ. ನಿಮ್ಮ ಈ ಸಂದೇಶಕ್ಕಾಗಿ ಧನ್ಯವಾದಗಳು. ಅಲ್ಲದೆ, ರೈಲ್ವೆಯಲ್ಲಿ ವ್ಯವಸ್ಥೆಗಳನ್ನು ಉತ್ತಮಗೊಳಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.
क्षमा प्रार्थी 🙏
बस यूँ ही बैठ गया था देखने,
कैसा महसूस करते होंगे वो लाखों ग़रीब जिनकी ज़िंदगी अभी भी ट्रेन के दरवाज़ों पे गुज़रती है।
धन्यवाद इस संदेश के लिए और देश की रेल व्यवस्था बेहतर करने के लिए। ❤️🙏 https://t.co/F4a4vKKhFy— sonu sood (@SonuSood) January 5, 2023