ಮುಚಖಂಡಿ ವೀರಭದ್ರೇಶ್ವರನಿಗೆ ನಾಣ್ಯಗಳಿಂದ ವಿಶೇಷ ಅಲಂಕಾರ

ಹೊಸದಿಗಂತ ವರದಿ, ಬಾಗಲಕೋಟ:
ಪ್ರತಿ ವರ್ಷದಂತೆ ಶ್ರಾವಣ ಮಾಸದಲ್ಲಿ ಭಕ್ತರ ಆರಾಧ್ಯದೈವ ಮುಚಖಂಡಿ ವೀರಭದ್ರೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.
ಇಂದು ಶ್ರಾವಣ ಮಾಸ ಮೂರನೇ ಮಂಗಳವಾರವಾಗಿರುವುದರಿಂದ ವೀರಭದ್ರೇಶ್ವರ ಸ್ವಾಮಿಗೆ ಐದು ರುಪಾಯಿ ನಾಣ್ಯಗಳ ಮೂಲಕ ಅಲಂಕಾರಕ ರೂಪ ನೀಡಲಾಗಿದೆ.
ಹೂವಿನಲ್ಲಿ ಐವತ್ತು, ನೂರು ರುಪಾಯಿ ನೋಟುಗಳ ಸರವನ್ನು ವೀರಭದ್ರೇಶ್ವರ ಸ್ವಾಮಿಗೆ ಅಲಂಕಾರ ಮಾಡುವ ಮೂಲಕ ಅರ್ಚಕರು ಭಕ್ತಿಯನ್ನು ಸಲ್ಲಿಸಿದ್ದಾರೆ. ವಿಶೇಷ ದಿನವಾದ್ದರಿಂದ ವೀರಭದ್ರೇಶ್ವರ ಸ್ವಾಮಿ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!