ದುರ್ಗಾಪುರದಲ್ಲಿ ಅಪಘಾತಕ್ಕೀಡಾದ ಸ್ಪೈಸ್‌ಜೆಟ್ : ತಪ್ಪಿದ ಭಾರೀ ದುರಂತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡ್‌ ಆಗುವ ವೇಳೆ ವಿಮಾನ ಅಪಘಾತಕ್ಕೀಡಾಗಿದೆ. ಮುಂಬೈನಿಂದ ದುರ್ಗಾಪುರಕ್ಕೆ ತೆರಳುತ್ತಿದ್ದ ಸ್ಪೈಸ್‌ಜೆಟ್ ಬೋಯಿಂಗ್ B737 ಲ್ಯಾಂಡ್‌ ಆಗುವಾಗ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಕೆಲ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ದುರ್ಗಾಪುರ ವಿಮಾನ ನಿಲ್ದಾಣದಲ್ಲಿ, ಲ್ಯಾಂಡಿಂಗ್‌ ಸಮಯದಲ್ಲಿ ಅತೀವವಾದ ಗಾಳಿಯಿಂದಾಗಿ ಅಪಘಾತ ಉಂಟಾಗಿದೆ ಎಂದು ಗಾಯಗೊಂಡ ಪ್ರಯಾಣಿಕ ಅಕ್ಬರ್ ಅನ್ಸಾರಿ ತಿಳಿಸಿದ್ದಾರೆ.

ಘಟನೆ ಬಗ್ಗೆ ಸ್ಪೈಸ್ ಜೆಟ್ ವಕ್ತಾರರು ಪ್ರತಿಕ್ರಿಯೆ ನೀಡಿದ್ದು, ಪ್ರಕ್ಷುಬ್ಧತೆಯ ವಾತಾವರಣದಿಂದ ಅವಘಡ ಉಂಟಾಗಿದೆ. ದುರದೃಷ್ಟವಶಾತ್ ಕೆಲ ಪ್ರಯಾಣಿಕರಿಗೆ ಗಾಯಗಳಾಗಿವೆ. ದುರ್ಗಾಪುರಕ್ಕೆ ಬಂದಿಳಿದ ತಕ್ಷಣ ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡಲಾಯಿತು ಎಂದರು.
ಈ ದುರದೃಷ್ಟಕರ ಘಟನೆಗೆ ಸ್ಪೈಸ್‌ಜೆಟ್ ವಿಷಾದ ವ್ಯಕ್ತಪಡಿಸುತ್ತದೆ ಮತ್ತು ಗಾಯಗೊಂಡವರಿಗೆ ಸಾಧ್ಯವಿರುವ ಎಲ್ಲ ವೈದ್ಯಕೀಯ ಸಹಾಯ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!