ಕೊಡಗಿನಲ್ಲಿ ಫೆ.25ರಂದು ವೀರಶೈವ ಸಮಾಜದ ಕ್ರೀಡಾಕೂಟ

ಹೊಸದಿಗಂತ ವರದಿ ಕುಶಾಲನಗರ:

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಫೆ.25 ರಂದು ಕುಶಾಲನಗರದಲ್ಲಿ ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಘಟಕದ ಹೆಚ್.ವಿಶಿವಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ 2021-22 ನೇ ಸಾಲಿನಲ್ಲಿ ಶೇ.80 ಮತ್ತು ಹೆಚ್ಚು ಅಂಕ ಪಡೆದ ಸಮಾಜ ಬಾಂಧವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಈ ಬಗ್ಗೆ ದಾಖಲೆಗಳೊಂದಿಗೆ ಅರ್ಜಿಗಳನ್ನು ಮಹಾಸಭಾ ಪ್ರಮುಖರಿಗೆ ಸಲ್ಲಿಸಬೇಕೆಂದು ಕೋರಿದರು.

ಅರ್ಜಿ ಜೊತೆ ವಿದ್ಯಾರ್ಥಿಗಳ 2 ಭಾವಚಿತ್ರಗಳು, ಅಂಕಪಟ್ಟಿ ಮತ್ತು ಆಧಾರ್‌ ಪ್ರತಿಗಳನ್ನು ಫೆಬ್ರವರಿ 10ರ ಒಳಗೆ ಶಾಂಭಶಿವಮೂರ್ತಿ – 9448336781, ಜಿ.ಎಂ. ಕಾಂತರಾಜು- 7483411601, ಸುರೇಶ್ ವೀರಾಜಪೇಟೆ- 9448108091, ಆದರ್ಶ್ ಸೋಮವಾರಪೇಟೆ -6362059198 ಮೊ.ಸಂಖ್ಯೆಗಳಿಗೆ ನೀಡುವಂತೆ ತಿಳಿಸಿದರು
ಮಹಾಸಭಾದ ವೇದಿಕೆ ಕಾರ್ಯಕ್ರಮ ಮಾರ್ಚ್ 11 ರಂದು ನಡೆಯಲಿರುವುದಾಗಿ ಅವರು ನುಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಸ್ ಶಾಂಭಶಿವಮೂರ್ತಿ, ಕೋಶಾಧ್ಯಕ್ಷ ಹೆಚ್.ಪಿ.ಶಿವಕುಮಾರ್ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!