ಸಂಡೇ, ಮಂಡೆ, ವಕೀಲನ ಸವಾಲಿಗೆ ನಾನು ಸಿದ್ದ: ಬಹಿರಂಗ ಚೆರ್ಚೆಗೆ ದಿನಾಂಕ, ಸ್ಥಳ ನಿಗದಿ ಮಾಡಿ-ಶ್ರೀರಾಮುಲು

ಹೊಸದಿಗಂತ ವರದಿ ಬಳ್ಳಾರಿ:

ಮಾಜಿ ಸಿ.ಎಂ.ಸಿದ್ದರಾಮಯ್ಯ ಸಂಡೆ, ಮಂಡೆ ವಕೀಲ ಇದ್ದಂತೆ, ಅವರಂತೆ ನಾನು ದ್ರೋಹದ ರಾಜಕಾರಣ ಮಾಡಿಲ್ಲ, ಮಾಡೋದು ಇಲ್ಲ, ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಕಿದ ಸವಾಲಿಗೆ ನಾನು ಸಿದ್ಧ. ಚೆರ್ಚೆಗೆ ದಿನಾಂಕ, ಸ್ಥಳ ನಿಗದಿಗೊಳಿಸಿ, ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರಿರಾಮುಲು ಪ್ರತಿಸವಾಲೆಸೆದರು.

ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಜಂಬಕೊಚ್ಚಿದ ಉತ್ತರ ಕುಮಾರನಂತೆ ಸಿದ್ದರಾಮಯ್ಯ ನನ್ನ ಕರ್ಮಭೂವಿಯಲ್ಲಿ ಸವಾಲೆಸಿದ್ದಾರೆ ಅದನ್ನು ನಾನು ಸ್ವೀಕರಿಸುವೆ, ತಾಕತ್ತಿದ್ದರೆ ಚೆರ್ಚೆಗೆ ಬನ್ನಿ ದಾಖಲೆ ಸಮೇತ ಉತ್ತರ ಕೊಡುವೆ ಎಂದು ಖಡಕ್ಕಾಗಿ ಮಾತನಾಡಿದರು. ಸಿದ್ದರಾಮಯ್ಯ ಒಬ್ಬ ಸರ್ಕಸ್ ಕಂಪನಿಯ ಜೋಕರ್ ಇದ್ದಂತೆ, ಶನಿವಾರ ನಡೆದ ಸಮಾವೇಶದ ಸರ್ಕಸ್ ಕಂಪನಿಯಲ್ಲಿ ಜೋಕರ್ ತರಹ ಕಾಣಿಸ್ತಿದ್ದ ಸಿದ್ದರಾಮಯ್ಯ ಸುಳ್ಳಿನ ಪಿತಾಮಹ ಇದ್ದಂತೆ ಎಂದು ವ್ಯಂಗ್ಯವಾಡಿದರು. ಮೋದಿಜೀ, ಅಮಿತ್ ಶಾ, ಸಿ.ಎಂ.ಬಸವರಾಜ್ ಬೊಮ್ಮಾಯಿ ಅವರು ಮಾಡಿದ ಅಭಿವೃದ್ಧಿ ಕೆಲಸಗಳ ಚಕ್ರವ್ಯೂಹದಿಂದ ದಾಟಿ ಬರಲು ಸಿದ್ದರಾಮಯ್ಯಗೆ ಸಾಧ್ಯವಾಗಲಿಲ್ಲ. ಹಾಗಾಗಿಯೇ ಭಯದಲ್ಲಿ ಮನಬಂದಂತೆ ಮಾತಾಡಿ ತೊಲಗಿದ್ದಾರೆ, ಸಿದ್ದರಾಮಯ್ಯನ ಪಾಪದ ಕೊಡ ತುಂಬಿ ತುಳುಕುತ್ತಿದೆ, ರಾಜಕೀಯದಿಂದ ಶಾಶ್ವತವಾಗಿ ಮನೆಗೆ ಕಳಿಸುವ ಕಾಲ ದೂರವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಒಬ್ಬ ಶಕುನಿ, ರಾಕ್ಷಸ ಇದ್ದಂತೆ, ತಾಯಿ ಚಾಮುಂಡೇಶ್ವರಿ ಕ್ಷೇತ್ರದ ಜನರು ಅದಕ್ಕಾಗಿಯೇ ಅವರನ್ನ ಮನೆಗೆ ಕಳಿಸಿದ್ದಾರೆ. ಮೋದಿಜೀ, ಅಮೀಶಾ, ಆರ್‌ಎಸ್ಎಸ್ ಸ್ವಾತಂತ್ರ್ಯಕ್ಕಾಗಿ ಏನೂ ಮಾಡಿಲ್ಲ ಅಂತಾರೆ, ಅವರದ್ದು ಬಿಡಿ ಸ್ವಾತಂತ್ರ್ಯಕ್ಕಾಗಿ ನಿನ್ನ ಕೊಡುಗೆ ಏನಪ್ಪ ಸಿದ್ದರಾಮಯ್ಯ ಮೊದಲು ತಿಳಿಸಿ. ನಿನ್ನಂತಹ ದ್ವೇಷ ರಾಜಕಾರಣ ದ್ರೋಹದ ಕೆಲಸ ನಾವು ಮಾಡೋಲ್ಲ ನಮ್ಮ ಸಂಸ್ಕೃತಿಯೂ ಅದಲ್ಲ ಎಂದರು. ನಿಮಗೆ ಎದುರಾಗ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ ಅವರನ್ನು ಸೋಲಿಸಿದ ಕಾರಣೀಕರ್ತ ನೀನು, ನಿನ್ನಂತಹ ಉಂಡು ಮನೆಗೆ ದ್ರೋಹ ಬಗೆಯುವ ಕೆಲಸ ನಾವು ಮಾಡೋಲ್ಲ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಈ ಹಿಂದೆ 1 ಸಾವಿರ 1500 ಕೋಟಿ ರೂ.ಕೊಡಲಾಗುತ್ತಿತ್ತು, ಈ ಬಾರಿ ನಮ್ಮ ಸಿ.ಎಂ.ಬೊಮ್ಮಾಯಿ 3 ಸಾವಿರ ಕೋಟಿ ರೂ.ಅನುದಾನ ನೀಡಿದ್ದಾರೆ, ಮುಂಬರುವ ಬಜೆಟ್ ನಲ್ಲಿ 5 ಸಾವಿರ ಕೋಟಿ ನೀಡುವೆ ಎಂದಿದ್ದಾರೆ. ಕ.ಕ.ಭಾಗಕ್ಕೆ ನಿನ್ನ ಕೊಡುಗೆ ಏನು ಎಂಬುದನ್ನು ಬಹಿರಂಗಪಡಿಸು ಎಂದು ಸವಾಲೆಸೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!