SHOCKING | ಮತ್ತೆ ಕೊಲ್ಕತ್ತಾ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ಹೊಸತಾಗಿ ಆರಂಭಿಸಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಒಂದೇ ದಿನದಲ್ಲಿ ಎರಡು ಬಾರಿ ಕಲ್ಲು ತೂರಾಟ ನಡೆಸಿದ್ದು, ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.

ನಿನ್ನೆ ಜಲಪೈಗುರಿಯಿಂದ ಹೌರಾಕ್ಕೆ ಹೋಗುವಾಗ ದಾಳಿ ನಡೆಸಿ ಎರಡು ಕಿಟಕಿ ಗಾಜುಗಳನ್ನು ಒಡೆಯಲಾಗಿತ್ತು. ಇಂದು ಹೌರಾದಿಂದ ಜಲಪೈಗುರಿಗೆ ರೈಲು ಹೋಗುತ್ತಿದ್ದಾಗ ಮತ್ತೆ ಕಲ್ಲು ತೂರಾಟ ನಡೆದಿದ್ದು, ಕಿಟಕಿ, ಬಾಗಿಲು ಜಖಂ ಆಗಿದೆ.

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ್ದು, ಕಾರ್ಯಾರಂಭಗೊಂಡ ಐದು ದಿನದಲ್ಲಿ ಎರಡನೇ ಬಾರಿ ದಾಳಿ ನಡೆದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!