ಸಮುದ್ರದ ಮಧ್ಯದಲ್ಲಿ ಮೀನುಗಾರರ ಮೇಲೆ ಅಪರಿಚಿತರ ದಾಳಿ, ದರೋಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಆರು ಮೀನುಗಾರರ ಮೇಲೆ ಅಪರಿಚಿತರು ಸಮುದ್ರದ ಮಧ್ಯದಲ್ಲಿ ಪಾಯಿಂಟ್ ಕ್ಯಾಲಿಮೆರೆ ಬಳಿ ದಾಳಿ ನಡೆಸಿ, ದರೋಡೆ ಮಾಡಿದ್ದಾರೆ .

ಘಟನೆ ಕುರಿತು ಮಾಹಿತಿ ನೀಡಿದ ಪೊಲೀಸರು, ಗಾಯಗೊಂಡವರಲ್ಲಿ ಮುರುಗನ್ ಎಂಬಾತನ ಮೂರು ಬೆರಳುಗಳನ್ನು ದಾಳಿಕೋರರು ತುಂಡರಿಸಿದ್ದಾರೆ. ಅವರು ಶ್ರೀಲಂಕಾದಿಂದ ಬಂದವರು ಎಂದು ಗಾಯಗೊಂಡ ಮೀನುಗಾರರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ನಂಬಿಯಾರ್ ನಗರದ ಮೀನುಗಾರರು ಸಮುದ್ರ ಮಧ್ಯದಲ್ಲಿ ಪಾಯಿಂಟ್ ಕ್ಯಾಲಿಮೆರ್ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ, ನಾಲ್ಕು ದೋಣಿಗಳಲ್ಲಿ ಬಂದ ಕೆಲವು ಅಪರಿಚಿತ ವ್ಯಕ್ತಿಗಳು ಅವರ ಹಡಗನ್ನು ಸುತ್ತುವರೆದು ಅವರ ಮೇಲೆ ದಾಳಿ ನಡೆಸಿದ್ದಾರೆ.
ದಾಳಿಯಿಂದ ರಕ್ಷಿಸಿಕೊಳ್ಳಲು ಯತ್ನಿಸಿದ ಮುರುಗನ್ ಅವರ ಮೂರು ಬೆರಳುಗಳನ್ನು ದಾಳಿಕೋರರು ಕತ್ತರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ಮೀನುಗಾರರ ಬಳಿಯಿಂದ ಜಿಪಿಎಸ್, ಮೊಬೈಲ್ ಫೋನ್, ಮೀನುಗಾರಿಕೆ ಬಲೆಗಳನ್ನು ದೋಚಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!