ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳಿಗೆ ಶಾಲೆಗೆ ಹೋಗಲು ಇನ್ನಷ್ಟು ಆಸ್ಕ್ತಿ ಮೂಡಿಸಬೇಕಾದ ಶಿಕ್ಷಕರಿಂದಲೇ ಮಕ್ಕಳು ಶಾಲೆಗೆ ಹೋಗಲು ನಿರಾಕರಿಸುವ ಪರಿಸ್ಥಿತಿ ತುಮಕೂರಿನ ಬೋರಗುಂಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿದೆ.
ಶಿಕ್ಷಕ ಮಂಜುನಾಥ್ ಪ್ರತಿದಿನಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಮಕ್ಕಳು ಶಾಲೆಗೆ ಹೋಗುವುದಕ್ಕೆ ನಿರಾಕರಿಸಿದ್ದಾರೆ. ಅನುಚಿತವಾಗಿ ವರ್ತಿಸಿದ ಮಂಜುನಾತ್ ಹಾಗೂ ಕರ್ತವ್ಯ ಲೋಪದ ಮೇಲೆ ಮುಖ್ಯ ಶಿಕ್ಷಕ ನಟರಾಜ್ನ್ನು ಅಮಾನತುಗೊಳಿಸಲಾಗಿದೆ.
ವಿದ್ಯಾರ್ಥಿನಿಯರು ಶಿಕ್ಷಕ ಮಂಜುನಾಥ್ ಬಗ್ಗೆ ಮನೆಯಲ್ಲಿ ಹೇಳಿದಾಗ ಪೋಷಕರು ಶಾಲೆಗೆ ಬಂದು, ಶಿಕ್ಷಕ ಮಂಜುನಾಥ್ಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಮಂಜುನಾಥ್ ವಿಚಾರಣೆ ನಡೆಯುತ್ತಿದೆ.