ಹೊಸದಿಗಂತ ವರದಿ ವಿಜಯಪುರ:
ಚಲಿಸುತ್ತಿದ್ದ ಓಮಿನಿ ಕಾರ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಓಮಿನಿ ಕಾರ್ ಭಸ್ಮವಾಗಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ನಡೆದಿದೆ.
ಅನಿಲ್ ಗೋಪಾಲ ಚವ್ಹಾಣ ಎಂಬುವರು, ಓಮನಿ ಕಾರ್ ನಲ್ಲಿ ಬಟ್ಟೆ ಮಾರಾಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕಾರ್ನಲ್ಲಿ ಬೆಂಕಿ ಕಾಣಿಸಿಕೊಂಡು ಕಾರ್ ಬೆಂಕಿಗಾಹುತಿಯಾಗಿದೆ.
ಚಾಲಕ ಪಾರಾಗಿದ್ದು, ಯಾವು ಪ್ರಾಣಹಾನಿಯಾಗಿಲ್ಲ.
ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.