ರಾಜಮಾತೆ ಪಾದಕ್ಕೆ ನಮಸ್ಕರಿಸಿದ ಸುಧಾಮೂರ್ತಿ: ನೆಟ್ಟಿಗರಿಂದ ವಿಮರ್ಶೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರು ಕಾರ್ಯಕ್ರಮವೊಂದರಲ್ಲಿ ರಾಜಮಾತೆ ಪ್ರಮೋದಾದೇವಿ ಕಾಲಿಗೆ ಎರಗಿ ಆಶೀರ್ವಾದ ಪಡೆದಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಸುಧಾ ಮೂರ್ತಿಯಂತಹ ಮಹನೀಯರು ಇನ್ನೊಬ್ಬರ ಕಾಲಿಗೆ ಬೀಳುವುದು ಸರಿಯಲ್ಲ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ರಾಜರ ಕಾಲ ಮುಗಿದರೂ ರಾಜವಂಶಕ್ಕೆ ಸೇರಿದವರಿಗೆ ತಲೆಬಾಗುವುದೇಕೆ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಸುಧಾಮೂರ್ತಿ ನಡವಳಿಕೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಆ ಗೌರವಕ್ಕೆ ಅವರು ಅರ್ಹರಿರುವುದರಿಂದಲೇ ಈ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು. ಹಿರಿಯರಿಗೆ ಗೌರವ ಸೂಚಿಸುವುದು ನಮ್ಮ ಸಂಸ್ಕೃತಿ. ಮೇಲಾಗಿ ವಯಸ್ಸು, ಪದವಿ ಮತ್ತು ಸ್ಥಾನವನ್ನು ಲೆಕ್ಕಿಸದೆ ನಾವು ರಾಜಮನೆತನದವರನ್ನು ಗೌರವಿಸುತ್ತೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!